Saturday, May 23, 2009

ಸತ್ಯ ಮತ್ತು ದೇಶದ ಪರ ಇರಬೇಕು

"ಪತ್ರಿಕೆಯೋ ಅಥವಾ ಚಾನಲ್ಲೊ ಅಥವಾ ನಿಮ್ಮಂಥಹ ಯಾವದೋ ಒಂದು ಬ್ಲಾಗೋ ಎಲ್ಲರಿಗೂ ಅವರದೇ ಆದ ಒಂದು ಮುಖ ಅಂಥಾ ಇರುತ್ತದೆ. ನಿಮ್‌ ಮುಖಾನೇ ಕಾಣ್ತಿಲ್ಲ..ಯಾಕಂದ್ರೆ ನೀವು ಯಾವ ಸಮಯದಲ್ಲಿ ಯಾರ ಪರವಾಗಿ ಇರ್ತಿರೋ ಅಥವಾ ವಿರುದ್ಧವಾಗಿರ್ತಿರೋ ಹೇಳೋಕೆ ಆಗಲ್ಲ.ಒಟ್ಟಾರೆ ನೀವು ಬಿಜೆಪಿ ವಿರೋಧಿಗಳು ಅನ್ನೋದಂತೂ ಸ್ಪಷ್ಟ..ಯಾಕಂದ್ರೆ ತತ್ವ ಸಿದ್ದಾಂತ..ಪಕ್ಷಗಳಿಗಷ್ಟೇ ಅಲ್ಲ ಮಾದ್ಯಮಕ್ಕೂ ಇರಬೇಕು ಅಂತ ವಾದ ಮಾಡೋನು ನಾನು..ನಿಮಗಂತೂ ಯಾವದೂ ಇಲ್ಲ ಬಿಡಿ..ನೀವು ಲೆಫ್ಟೂ ಅಲ್ಲ ಇತ್ತ ರೈಟೂ ಅಲ್ಲ..ಎಡಬಿಡಂಗಿ ಆದ್ರೆ ಭಾರೀ ಕಷ್ಟ ಸ್ವಾಮಿ...."

ಚಾಣಾಕ್ಯ ಎನ್ನುವವರು ಇಂತಹದೊಂದು ಕಾಮೆಂಟ್ ಮಾಡಿದ್ದಾರೆ. ನಮ್ಮ ಬ್ಲಾಗ್ ನ ಈ ಹಿಂದಿನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. ಅವರಿಗೆ ಮೊದಲು ನಮ್ಮ ವಂದನೆಗಳು. ಅವರು ಮೊದಲು 'ನಮ್ಮ ಮುಖ' ಕಾಣುತ್ತಿಲ್ಲ ಎಂದು ದೂರಿದ್ದಾರೆ. ಮುಂದುವರೆಸಿ, ನೀವು ಯಾವ ಸಮಯ ಯಾರ ಪರ ಇರ್ತಿರೋ ಗೊತ್ತಿಲ್ಲ, ಆದರೆ ನೀವಂತೂ ಬಿಜೆಪಿ ವಿರೋಧಿಗಳು ಎನ್ನುವುದಂತೂ ಸ್ಪಷ್ಟ - ಎಂದಿದ್ದಾರೆ.

ಇವರ ಮಾತಿಗೆ ನೇರ, ದಿಟ್ಟ ವಾಗಿ ಹೇಳುವುದಾದರೆ, ಸ್ವಂತ ಪ್ರಜ್ಞೆ ಇರುವವನು ಮತ್ತು ಸಮಾಜದ ಹಿತ ಮುಖ್ಯ ಎಂದುಕೊಂಡ ಎಂಥವನೇ ಆಗಲಿ ಅವನು ಬಿಜೆಪಿ ವಿರೋಧಿಯಾಗಿರುತ್ತಾನೆ. ಅದರ ತತ್ವದಲ್ಲಿಯೇ ಎಡವಟ್ಟುಗಳಿವೆ. ನೂರಾರು ಜಾತಿ, ಜನಾಂಗ, ಭಾಷೆ ಒಳಗೊಂಡಿರುವ ಒಂದು ದೇಶವನ್ನು ಒಂದು ಧರ್ಮದ ಕಣ್ಣುಗಳಿಂದ ನೋಡುವವರನ್ನು ದೇಶಭಕ್ತರೆನ್ನಬೇಕೆ? ಪಕ್ಕದ ಮನೆಯ ಅನ್ಯಧರ್ಮೀಯನನ್ನು ಶತ್ರುವಿನಂತೆ ಕಾಣುವ ಮನೋಧರ್ಮ ಹುಟ್ಟುಹಾಕಿದ ಪಕ್ಷವನ್ನು ಆರಾಧಿಸಬೇಕೆ? ಒಂದು ನಂಬಿಕೆ ಇತ್ತು, ವಿದ್ಯಾವಂತರೆಲ್ಲ ಬಿಜೆಪಿ ಜತೆ ಇದ್ದಾರೆ. ಈ ಮಾತು ಕೇಳಿದಾಗೆಲ್ಲ, ಅವರೆಲ್ಲಾ ಎಷ್ಟರ ಮಟ್ಟಿಗೆ ವಿದ್ಯಾವಂತರು ಎಂಬ ಸಂಶಯ ಮುಊಡುತ್ತಿತ್ತು.

ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್, ಕಳೆದವಾರದ ತಮ್ಮ ಅಂಕಣದಲ್ಲಿ ಕಣ್ಣೀರು ಇಡುವುದೊಂದು ಬಾಕಿ. ಅಡ್ವಾನಿ ಕರ್ಣನಂತೆ. ಯುದ್ಧದಲ್ಲಿ ಗೆಲ್ಲುವ ಸಾಮರ್ಥ್ಯ ಇತ್ತಂತೆ, ಆದರೂ ಗೆಲ್ಲಲಿಲ್ಲ. ಗಾಂಧಿನಗರದ ಜನ ಅಡ್ವಾನಿಯನ್ನು ಗೆಲ್ಲಿಸಿದ ಅಂತರವನ್ನು ಸ್ವಲ್ಪ ಗಮನಿಸಿ. ಹಿಂದಿನ ಚುನಾವಣೆಗಿಂತ ಈ ಬಾರಿ ಅವರ ಜನಪ್ರಿಯತೆ ಕಡಿಮೆ ಆಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರೂ, ಅವರ ಜನಪ್ರಿಯತೆ ಹೆಚ್ಚಲಿಲ್ಲ. ಗಾಂಧಿನಗರದಲ್ಲಿಯೇ ನಡೆಯದ್ದಿದುದು ಬೇರೆಲ್ಲಿ ನಡೆದೀತು?

ಭಟ್ ತಮ್ಮ ಅಂಕಣದಲ್ಲಿ ಅಡ್ವಾನಿಯನ್ನು ಕಳಂಕ ರಹಿತ ವ್ಯಕ್ತಿ ಎಂದಿದ್ದಾರೆ. ಅವರ ವ್ಯಕ್ತಿತ್ವದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದೆಲ್ಲಾ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಒಮ್ಮೆ ಅಡ್ವಾನಿಯ ಇತಿಹಾಸ ಗಮನಿಸಿ. ಅವರ ವ್ಯಕ್ತಿತ್ವ ಪೂರ್ತಿ ಕಪ್ಪುಮಯ. ಬಾಬರಿ ಮಸೀದಿ ಧ್ವಂಸ ದೇಶ ಕಂಡ ಘೋರ ಕೃತ್ಯ. ಅದರ ನೇತೃತ್ವ ವಹಿಸಿದ್ದು ಯಾರು ಸ್ವಾಮಿ? ದೇಶದ ಉದ್ದಗಲಕ್ಕೂ ಅಡ್ಡಾಡಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ತೇವೆ ಎಂದು ಬೊಬ್ಬೆ ಹೊಡೆಯುತ್ತ ಓಟು ಕೇಳಿದ್ದು ಪ್ರಶಂಸಾರ್ಹ ಕೆಲಸವೇ? ಇಂದಿನ ನರೇಂದ್ರ ಮೋದಿ, ವರುಣ್ ಗಾಂಧಿಯಂತಹವರಿಗೆ ಮುಊಲ ಪ್ರೇರಣೆಯೇ ಈ ಅಡ್ವಾನಿ. ಅಡ್ವಾನಿ ಪ್ರಧಾನಿಯಾಗದೇ ಹೋದದ್ದಕ್ಕೆ ಪಕ್ಷ ಇವರೀರ್ವರನ್ನು ಹೊಣೆ ಮಾಡುವ ಮುನ್ನು ಇದನ್ನೆಲ್ಲಾ ಪಕ್ಷ ಯೋಚಿಸಬೇಕಿದೆ.

ಪತ್ರಿಕೆಗಳು ನಿಷ್ಟಕ್ಷಪಾತಿಯಾಗಿರಬೇಕು ಎನ್ನವುದು ಎನ್ನುವುದನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ನಮ್ಮ ಪ್ರಕಾರ ಪತ್ರಿಕೆಗಳು ಸತ್ಯ ಮತ್ತು ದೇಶದ ಪರ ಇರಬೇಕು. ಅದರರ್ಥ ಸತ್ಯವನ್ನು ತಿರುಚಿ, ದೇಶದ ವೈವಿಧ್ಯತೆಗೆ ಭಂಗ ತರುವವರ ವಿರುದ್ಧ ಇರುಬೇಕು. ವಿನೋದ್ ಮೆಹ್ತಾ ಮಾತಿನಲ್ಲಿ ಹೇಳುವುದಾದರೆ "journalist is not an ideological eunuch". ಹಾಗೂ ಯಾರಾದರೂ ತಾನು ಸೈದ್ಧಾಂತಿಕವಾಗಿ ನಪುಂಸಕ ಎಂದು ಭಾವಿಸುವುದಾದರೆ ಅಂತಹವನನ್ನು ಗಂಭಿರವಾಗಿ ಪರಿಗಣಿಸುವ ಅಗತ್ಯವೇ ಇಲ್ಲ ಎನ್ನುತ್ತಾರೆ ಮೆಹ್ತಾ. ಈ ಮಾತಿನೊಂದಿಗೆ ಇಂದಿನ ನಮ್ಮ ಮಾತು ಮುಗಿಸುತ್ತೇವೆ.

Monday, May 18, 2009

ಅಡ್ಡ-ವಾಣಿಯೇ ಅಡ್ಡವಾಯಿತು ಅಡ್ವಾನಿಗೆ...

ಸೋತು ಸುಣ್ಣವಾದ ಮೇಲೆ ಅಡ್ವಾನಿ ಸೋನಿಯಾ ಗಾಂಧಿ ಮತ್ತು ಮನಮೋಹನ ಸಿಂಗ್ ರಿಗೆ ಫೋನ್ ಹಚ್ಚಿದ್ದರಂತೆ. "ನೀವು ಗೆದ್ದದ್ದೀರಿ. ಶುಭಾಶಯಗಳು" ಎಂದು ಇಬ್ಬರಿಗೂ ಶುಭ ಕೋರಿದ್ದಾರೆ. ಪ್ರತಿಯಾಗಿ ಸೋನಿಯಾ ಮತ್ತು ಮನಮೋಹನ್ ಅಡ್ವಾನಿಗೆ 'ಧನ್ಯವಾದ' ಹೇಳಿದ್ದಾರೆ. ಅವರು ಥ್ಯಾಂಕ್ಸ್ ಹೇಳಿದ್ದು, ಕೇವಲ ಶುಭಾಶಯಕ್ಕೆ ಪ್ರತಿಯಾಗಿ ಅಲ್ಲ. ಕಾಂಗ್ರೆಸ್ ಗೆಲುವಿನಲ್ಲಿ, ಅಡ್ವಾನಿ ಮತ್ತು ಅವರ ಪಡೆಯ ಹುಡುಗರ ಪಾತ್ರ ಬಹುದೊಡ್ಡದಿತ್ತು, ಹಾಗಾಗಿ ಯುಪಿಎ ಅಧ್ಯಕ್ಷೆ ಅಡ್ವಾನಿಗೆ ವಿಶೇಷ ಧನ್ಯವಾದ ಹೇಳಿದ್ದಾರೆ.
ಮೊದಲು ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಎಂದು ಅಡ್ವಾನಿ ಅಡ್ಡ-ದನಿಯಲ್ಲಿ ಮಾತು ಆರಂಭಿಸಿದರು. ಪ್ರತಿ ನಿರ್ಧಾರಕ್ಕೂ ಪ್ರಧಾನಿ 10 ಜನಪಥ್ ದ ಒಪ್ಪಿಗೆ ಪಡೆಯಬೇಕು ಎಂದು ಟೀಕಿಸಿದರು. ನರೇಂದ್ರ ಮೋದಿ ಇದನ್ನೇ ಮುಂದುವರಿಸಿದರು. ರಾಜ್ಯ ಮಟ್ಟದ ಕಾಂಜಿ-ಪಿಂಜಿ ನಾಯಕರೆಲ್ಲ ಇದೇ ಮಂತ್ರ ಪಠಿಸಲು ಮುಂದಾದರು.
ಕಳೆದ ಬಾರಿ ಚುನಾವಣೆಯಿಂದ ಬಿಜೆಪಿ ಪಾಠ ಕಲಿಯಲಿಲ್ಲ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. 2004 ರಲ್ಲಿ ಸೋನಿಯಾ ವಿದೇಶಿ, ವಿದೇಶಿ ಮುಊಲದವಳು ಪ್ರಧಾನಿಯಾಗುವುದು ಸರಿಯೇ ಎಂದೆಲ್ಲಾ ಪ್ರಚಾರ ಮಾಡಿದರು. (ಕನ್ನಡದ ಪತ್ರಿಕೆಯೊಂದು, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾಳೆ, ಇದು ದೇಶಕ್ಕೆ 'ನಾಚಿಕಗೇಡಿನ' ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆಯಿತು.) ಆದರೆ ಆ ಯಾವ ಆರೋಪಗಳೂ ಪಕ್ಷಕ್ಕೆ ನೆರವಾಗಲಿಲ್ಲ. ಈ ಬಾರಿಯುಊ ಇಂತಹದೇ ತಪ್ಪು ಮಾಡಿದರು. 'ದುರ್ಬಲ ಪ್ರಧಾನಿ' ಎಂದಷ್ಟೂ, ಸಿಂಗ್ ಸಬಲರಾಗುತ್ತಾ ಬೆಳೆದರು.
ವರುಣ್ ಗಾಂಧಿ ಕೂಡಾ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಫಿಲಿಬಿಟ್ ನಲ್ಲಿ ಮಾತನಾಡುತ್ತಾ, ಅದ್ಯಾವಾಗ ಅಲ್ಪಸಂಖ್ಯಾತರನ್ನು ಕತ್ತರಿಸುವ ಮಾತನಾಡಿದರೋ, ಆಗಲೇ ದೇಶದ ಮುಊಲೆ ಮುಊಲೆಗಳಲ್ಲಿ ಬಹುದೊಡ್ಡ ಮೊತ್ತದ ಮತಗಳು ಕಾಂಗ್ರೆಸ್ ಬುಟ್ಟಿಗೆ ಖಾತ್ರಿಯಾದವು.
ಮಂಗಳೂರಿನಲ್ಲಿ ಒಂದಿಷ್ಟು ಪುಂಡರು, ಚರ್ಚ್ ಮೇಲೆ, ಪಬ್ ಮೇಲೆ ದಾಳಿ ನಡೆಸಿದರಲ್ಲ, ಅವರಿಗೆಲ್ಲಾ ಕಾಂಗ್ರೆಸ್ ಒಂದು "thanks giving" ಸೆರೆಮನಿ ಇಟ್ಟುಕೊಂಡರೂ ತಪ್ಪಿಲ್ಲ. ಅವರು ಬಿಜೆಪಿ ಪಕ್ಷದ ಮುಖವಾಡವನ್ನು ಕಳಚಿ, ಅದರ ನಿಜ ಸ್ವರೂಪವನ್ನು ದೇಶಕ್ಕೆ ತೋರಿಸಿದ ನಿಜ ಮನುಜರು!
ಗಾಂಧಿನಗರದಲ್ಲಿ ಅಡ್ವಾನಿ, ಫಿಲಿಬಿಟ್ ನಲ್ಲಿ ವರುಣ್, ಮಂಗಳೂರಿನಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ ದೇಶದಲ್ಲಿ ಸೋಲುಣ್ಣಲು ಅವರ ಪಾತ್ರ ಕಡಿಮೆ ಏನಿಲ್ಲ.

Monday, May 11, 2009

ಶೃತಿ ವಿಚ್ಛೇದನ ಮತ್ತು ಪಕ್ಷದ ಶಿಸ್ತು...

ನಟಿ ಶೃತಿ ಸುದ್ದಿಯಲ್ಲಿದ್ದಾಳೆ. ಪತಿ ಮಹೇಂದರ್ ನಿಂದ ದೂರವಾಗಲು ಬಯಸಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ. ನಟ, ನಟಿಯರ ದಾಂಪತ್ಯ ಸುದ್ದಿಮಾಧ್ಯಮಗಳಿಗೆ ಸದಾ ಬಹುಬೇಡಿಕೆಯ ಸರಕು. ಕೆಲವು ಟ್ಯಾಬ್ಲಾಯ್ಡ್ ಗಳಿಗೆ ಈ ಬೆಳವಳಿಗೆ ಸೆಂಟರ್ ಪೇಜೆ ಸೆನ್ಸೇಷನ್!
ಇದೇ ಸಮಯಕ್ಕೆ ಕಾದು ಕೂತಿದ್ದವರಂತೆ ಬಿಜೆಪಿಯ ಕೆಲ ನಾಯಕ, ನಾಯಕಿಯರು ಜಾಗೃತರಾಗಿದ್ದಾರೆ. ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ. ಶೃತಿ ವಿಚ್ಛೇದನ ಕೋರುವ ಮುಊಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದಾಳೆ ಎಂಬುದು ಅವರ ದೂರು. ಆ ಕಾರಣ ಶೃತಿಯನ್ನು ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಸದಾನಂದಗೌಡರ ಬೆನ್ನು ಬಿದ್ದಿದ್ದಾರೆ. ಆಕೆಯನ್ನು ಪದಚ್ಯುತಗೊಳಿಸಲು ಒತ್ತಾಯ ಮಾಡುವುದೆಂದರೆ, ತಮಗೇ ಆ ಸ್ಥಾನ ಕೊಡಿ ಎಂದು ಬೇಡಿಕೆ ಮುಂದಿಡುವುದು ಎಂದರ್ಥ. ಪ್ರಮೀಳಾ ನೇಸರ್ಗಿ ಮತ್ತಿತರರು ಇಂತಹ ಪ್ರಯತ್ನದಲ್ಲಿದ್ದಾರೆ.
ಸದಾನಂದ ಗೌಡರು ಸೋಮವಾರ ಪತ್ರಿಕೆಗಳಿಗೆ ಮಾತನಾಡಿ, ತಾನು ಮಹೇಂದರ್, ಶೃತಿ ಜೋಡಿಯನ್ನು ಒಂದು ಗೂಡಿಸಲು ಪ್ರಯತ್ನಮಾಡಿ ಸೋತೆ. ಆಕೆಯನ್ನು ಅಧ್ಯಕ್ಷ ಹುದ್ದೆಯಿಂದ ತೆಗೆಯುವ ವಿಚಾರವನ್ನು ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಅವರ ಮಾತುಗಳಲ್ಲೇ ಹೇಳುವುದಾದರೆ, ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ. ಶೃತಿಯ ಇಂತಹ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದೆ.
ಶಿಸ್ತಿನ ಪಕ್ಷ ಎಂದರೇನು?
ಹಾಗಾದರೆ ಪಕ್ಷದ ಕಾರ್ಯಕರ್ತೆ ಗಂಡನಿಂದ ಬೇಸತ್ತು ಬೇರೆ ಗಂಡಸಿನೊಂದಿಗೆ ಜೀವನ ಮಾಡುವ ಉದ್ದೇಶದಿಂದ ವಿಚ್ಛೇದನ ಕೋರಿದರೆ, ಅದು ಪಕ್ಷದ ಶಿಸ್ತಿನ ಉಲ್ಲಂಘನೆಯೆ? ಬಿಜೆಪಿ ಆಂತರಿಕ ಸಂವಿಧಾನ ಹಾಗೆ ಹೇಳುತ್ತದೆಯೆ? ವೈಯಕ್ತಿಕ ಜೀವನದಲ್ಲಿ ಬೇಸತ್ತು ಬೇರೆ ಆಯ್ಕೆಯ ಮೊರೆ ಹೋದರೆ, ಪಕ್ಷಕ್ಕೆ ಮುಜುಗರ ಆಗುವುದೆ?
ಬಿಜೆಪಿಗೆ ಶಿಸ್ತಿನ ಪಕ್ಷ ಎಂಬ ಹಣೆಪಟ್ಟಿ ಬರಲು ಇರುವ ಕಾರಣ, ಆ ಪಕ್ಷದಲ್ಲಿರುವ ಅನೇಕರು ಆರ್ ಎಸ್ ಎಸ್ ಮುಊಲದವರು. ಮೊದಲು ಅಲ್ಲಿ ಕೋಲು ಹಿಡಿದು ವ್ಯಾಯಾಮ ಮಾಡಿದವರು. ಇಂತಿಷ್ಟು ಹೊತ್ತಿಗೆ ಎದ್ದು, ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡಿದ್ದ ಕಾರಣ ಅವರನ್ನು ಶಿಸ್ತಿನ ಸಿಪಾಯಿಗಳು, ಅವರು ಇರುವ ಪಕ್ಷ ಶಿಸ್ತಿನ ಪಕ್ಷ ಎಂದು ಅವರೇ ಪ್ರಚಾರ ಮಾಡಿದರು. ಆದರೆ ಅವರಿಗೆ ಎಂದಿಗೂ ಬಹುಮುಖೀ ಸಂಸ್ಕೃತಿ ದೇಶವನ್ನು ಗ್ರಹಿಸುವ ಕಲೆಯನ್ನು ಆ ಶಿಸ್ತು ಕಲಿಸಲೇ ಇಲ್ಲ. ಆ ಕಾರಣ ಒಬ್ಬ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ, ಅದನ್ನು ಪಕ್ಷಕ್ಕಾದ ಮುಜುಗರ ಎನ್ನುತ್ತಾರೆ.
ಹಾಗಾದರೆ, ಬಿಜೆಪಿಯಲ್ಲಿದ್ದಾಕ್ಷಣ, ಗಂಡ ಎಷ್ಟೇ ಕಷ್ಟ ಕೊಟ್ಟರೂ ಯಾವ ಮಹಿಳೆಯೂ ವಿಚ್ಛೇದನ ಪಡೆಯದೇ ಇರಬೇಕೇನು?
ಒಂದು ಕ್ಷಣ ಬಿಜೆಪಿಯ 'ಅಪ್ರತಿಮ ಪ್ರತಿಭೆ' ರೇಣುಕಾಚಾರ್ಯನನ್ನು ನೆನಪು ಮಾಡಿಕೊಳ್ಳಿ. ಜಯಲಕ್ಷ್ಮಿ ಎಂಬ ನರ್ಸ್ ಜೊತೆ ರಾದ್ಧಾಂತ ಮಾಡಿಕೊಂಡ ಆಸಾಮಿ. ಆಕೆಗೆ ನಾನಾ ಆಮಿಷ ಒಡ್ಡಿ, ಮೋಸ ಮಾಡಿದನೆಂಬ ಆರೋಪಗಳಿವೆ. ಆಕೆ ಹಲವು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದುಂಟು. ಪತ್ರಿಕಾಗೋಷ್ಪಿಯೊಂದನ್ನು ಕರೆದು, ರೇಣುಕಾಚಾರ್ಯನ ಲೀಲೆಗಳನ್ನು ಜಗಜ್ಜಾಹೀರು ಮಾಡಿದಳು.
ನೆನಪಿರಲಿ, ಆಗ ಈ ಸೊಕಾಲ್ಡ್ ಶಿಸ್ತಿನ ಪಕ್ಷಕ್ಕೆ ಮುಜುಗರವಾಗಲಿಲ್ಲ, ಅದರ ಶಿಸ್ತು ಉಲ್ಲಂಘನೆ ಆಗಲಿಲ್ಲ!! ಅದೇ ವ್ಯಕ್ತಿ ಶಾಸಕನಾಗಿ ಮುಂದುವರಿಯುತ್ತಾನೆ. ಮುಂದೆ ಹಟ್ಟಿ ಚಿನ್ನದ ಗಣಿಗೆ ಅಧ್ಯಕ್ಷನಾಗುತ್ತಾನೆ.
ಅದೇ ಪತ್ರಿಕಾಗೋಷ್ಟಿಯಲ್ಲಿ ಯಡಿಯುಊರಪ್ಪ ಮತ್ತು ಪಕ್ಷದ ಇನ್ನೊಬ್ಬ ಪ್ರಮುಖ ನಾಯಕಿ ಮಧ್ಯೆ ಮಧುರ ಬಾಂಧವ್ಯ ಇದೆ ಎಂದು ಜಯಲಕ್ಷ್ಮಿ ಸಾರಿದಳು. ಅವರ ಸಂಬಂಧವೇ ತಮ್ಮ ಮತ್ತು ರೇಣುಕಾಚಾರ್ಯರ ಸಂಬಂಧಕ್ಕೆ ಪ್ರೇರಣೆ ಎಂದೂ ಹೇಳಿದಳು. ಆಗ ಪಕ್ಷಕ್ಕೆ ಮುಜುಗರ ಆಗಲಿಲ್ಲವೇ ಮಿಸ್ಟರ್ ಸದಾನಂದಗೌಡರೆ?
ಟಿವಿ9 ರ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಶೃತಿ ಹೇಳಿದ್ದು "ಸದಾನಂದ ಗೌಡರ ಹೆಂಡತಿ ಅವರಿಂದ ಡೈವೋರ್ಸ್ ಪಡೆಯಲು ಅರ್ಜಿ ಹಾಕಿದ್ದರೆ, ಅವರಿಗೆ ಮುಜುಗರ ಆಗಬೇಕಿತ್ತು. ನಾನು ನನ್ನ ಗಂಡನಿಂದ ವಿಚ್ಛೇದನ ಕೋರಿದರೆ ಅವರಿಗೇಕೆ ಮುಜುಗರ?"
ಉತ್ತರ ಸರಿಯಾಗಿಯೇ ಇತ್ತು. ಶೃತಿಯ ನಿರ್ಧಾರ ಏನೇ ಇರಲಿ. ಅದರ ಪರಿಣಾಮಗಳನ್ನು ಆಕೆ ಎದುರಿಸುತ್ತಾಳೆ.

Monday, May 4, 2009

ಈಗ ಮಾಡಬೇಕಾದ್ದು...

ಏಪ್ರಿಲ್ - ಮೇ ಬಂತೆಂದರೆ ಪ್ರೆಸ್ ಕ್ಲಬ್ ನಲ್ಲಿ ಪ್ರೊಮೊಷನ್, ಹೈಕ್, ಟ್ರಾನ್ಸ್ ಫರ್..ಗಳದ್ದೇ ಸುದ್ದಿ. ಸಹೋದ್ಯೋಗಿಗಳ ಮಧ್ಯೆ ಈರ್ಷ್ಯೆ, ಇಗೋ, ಜಿದ್ದುಗಳೆಲ್ಲವೂ ಜಾಗೃತಗೊಳ್ಳುವ ಕಾಲವೂ ಇದೇ. ಅವನಿಗೆ "ಒಟ್ಟಿಗೆ ಎರಡೆರಡು ಇಂಕ್ರಿಮೆಂಟ್, ನನಗೋ ಒಂದೇ" - ಎಂದು ಕೊರಗುವವರು ಕೆಲವರಾದರೆ, ಮತ್ತೆ ಕೆಲವರದು "ಅವರದು ಜಾತಿ ರಾಜಕೀಯ. ನಾವು ಎಷ್ಟೇ ಕೆಲಸ ಮಾಡಿದರೂ ಗುರುತಿಸೋಲ್ಲ" ಎಂಬ ಗೊಣಗಾಟ. "ಏನೋ ದಿಕ್ಕು ತಪ್ಪಿ ಇಲ್ಲಿಗೆ ಬಂದ್ಬಿಟ್ವಿ. ಆದಷ್ಟು ಬೇಗ ಕಳಚಕೋಳೋದು ಒಳ್ಳೇದು" - ಎಂದು ನಿಟ್ಟುಸಿರು ಬಿಡುವವರದು ಇನ್ನೊಂದು ಗುಂಪು. - ಇದು ಪ್ರತಿವರ್ಷ ಏಪ್ರಿಲ್-ಮೇ ದಿನಗಳ ಬೆಳವಣಿಗೆಗಳು.
ಆದರೆ ಈ ವರ್ಷ ಹಾಗಿಲ್ಲ.
ನಿಜ. ಹಿಂದಿನಂತಿಲ್ಲ ಈ ವರ್ಷ. ಪತ್ರಕರ್ತರು ಪ್ರೊಮೊಷನ್ಸ್ ಬಗ್ಗೆ ಮಾತನಾಡುತ್ತಿಲ್ಲ. ಯಾಕೆಂದರೆ ಇರೋ ಪೊಸಿಷನ್ ಉಳಿದರೆ ಸಾಕು ಎನ್ನುವ ಸ್ಥಿತಿ ಅವರದು. ಹೈಕ್ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾರಣ, ಅವರು ಇರೋ ಸಂಬಳ ಕಟ್ ಆಗದಿದ್ರೆ ಅದೇ ಸಮಾಧಾನ ಎನ್ನುವ ಹಂತ ತಲುಪಿದ್ದಾರೆ. ಜಾಗತಿಕ ಆರ್ಥಿಕ ಕುಸಿತ ಪತ್ರಕರ್ತರನ್ನು ಇಂತಹ ಸ್ಥಿತಿ ತಂದು ನಿಲ್ಲಿಸಿದೆ. ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆ ತನ್ನ ಉದ್ಯೋಗಿಗಳ ಜೇಬಿಗೆ ಕತ್ತರಿ ಹಾಕಿತು. ಡೆಕ್ಕನ್ ಕ್ರಾನಿಕಲ್ ದೊಡ್ಡ ಸಂಬಳ ಕೊಟ್ಟು ಕರೆದುಕೊಂಡು ಬಂದಿದ್ದವರಿಗೆ ನಿರಾಸೆ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮೊನ್ನೆ ಮೊನ್ನೆ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕ ಶೇಖರ್ ಗುಪ್ತಾ ಬೆಂಗಳೂರಿನಲ್ಲಿದ್ದರು. ಐಐಜೆಎನ್ಎಂ ಘಟಿಕೋತ್ಸವದಲ್ಲಿ ಮಾತನಾಡುತ್ತ, ಆರ್ಥಿಕ ದುಸ್ಥಿತಿ ನಂತರದ ದಿನಗಳು ಪತ್ರಿಕೋದ್ಯಮದ ಪಾಲಿಗೆ ಸುವರ್ಣ ಯುಗ ಕಲ್ಪಿಸಲಿವೆ ಎಂದರು. ಕೇವಲ ವೃತ್ತಿ ನೈಪುಣ್ಯ ಉಳ್ಳವರು ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ಆಗ ಪತ್ರಿಕೋದ್ಯಮ ಉತ್ತಮ ಏಳಿಗೆ ಸಾಧಿಸಲು ಸಾಧ್ಯ ಎಂದರು.
ಅವರ ಮಾತುಗಳು, ಪತ್ರಕರ್ತರೆಲ್ಲರು ನಾವು ನಿಜಕ್ಕೂ ಈ ಕ್ಷೇತ್ರದಲ್ಲಿ ಉಳಿಯಲು ಅರ್ಹರೇ ಎಂಬುದನ್ನು ಯೋಚಿಸುವಂತೆ ಮಾಡುತ್ತವೆ. ಹಾಗೆ ಸ್ವ ವಿಮರ್ಶೆಗೆ ತೊಡಗುವ ಪತ್ರಕರ್ತ ನಿಜಕ್ಕೂ ಒಳ್ಳೆಯ ಪತ್ರಕರ್ತನಾಗುವತ್ತ ಹೆಜ್ಜೆ ಹಾಕುತ್ತಾನೆ. ನಮ್ಮ ಪತ್ರಕರ್ತರು ಈಗ ಮಾಡಬೇಕಾದ್ದು ಅದನ್ನೇ.

Sunday, May 3, 2009

ಆ ಕರಾಳ ದಿನಗಳು

ಗುರುದ್ವಾರದ ಎರಡನೇ ಮಹಡಿಯಿಂದ ಒಂದು ಮುಖ ಇಣುಕುತ್ತಿದೆ. ಕೆಳಗೆ ಭೀಕರ ಹಿಂಸೆ. ಅಂದು ಆಡಳಿತದಲ್ಲಿದ್ದ ನೇತಾರರು, ಅವರ ಚೇಲಾಗಳು ಕಬ್ಬಿಣದ ರಾಡುಗಳಿಂದ ಮೊದಲು ಒಬ್ಬನಿಗೆ ಬಾರಿಸಿದರು. ದಿಗಿ ದಿಗಿ ಉರಿಯುತ್ತಿದ್ದ ಟೈರ್ ಒಂದನ್ನು ಅವನ ಕತ್ತಿಗೆ ನೇತುಹಾಕಿ, ಅವನ ದೇಹದ ಇಂಚಿಂಚು ಬೆಂಕಿಗೆ ಆಹುತಿಯಾಗಿ ಸಾಯುವುದನ್ನು ನೋಡಿ ಆನಂದಿಸಿದರು. ಹೀಗೆ ಹತನಾದ ವ್ಯಕ್ತಿಯ ಸಹೋದರ, ಗುರುದ್ವಾರದ ಎರಡನೇ ಮಹಡಿಯಿಂದ ಎಲ್ಲವನ್ನೂ ನೋಡುತ್ತಿದ್ದ. ತನ್ನೆದುರಿಗೆ ಸಹೋದರ ಸಾಯುವುದನ್ನು ನೋಡಲಾಗದೆ ಚೀತ್ಕರಿಸಿದ.
ತೀರಾ ಆಪ್ತರು ಎದುರಿಗೆ ಸಾಯುತ್ತಿರುವಾಗ, ಅವರನ್ನು ಬದುಕಿಸಲು ಸಾಧ್ಯವಾಗದ ಅಸಹಾಯಕತೆ ಇದೆಯಲ್ಲ, ಅದಕ್ಕಿಂತ ಹಿಂಸೆ ಮತ್ತೊಂದಿಲ್ಲ. ಹೀಗೆ ಆಗ ದಿಲ್ಲಿಯಲ್ಲಿ ಎಷ್ಟೋ ಮಂದಿ ಸತ್ತು ಹೋದರು. ಎಷ್ಟೋ ಮಕ್ಕಳು ತಮ್ಮ ಪೋಷಕರ ಹತ್ಯೆಗೆ ಮುಊಕ ಸಾಕ್ಷಿಗಳಾದರು. ಅಂದಹಾಗೆ ಅವು 1984 ರ ದಿಲ್ಲಿ ದಿನಗಳು. ಇಂದಿರಾ ಗಾಂಧಿ ಹತ್ಯೆ ನಂತರ ಸಿಖ್ ರ ಮಾರಣ ಹೋಮಕ್ಕೆ ಕಾಂಗ್ರೆಸ್ ನಾಯಕರು ನೇತೃತ್ವ ವಹಿಸಿದ್ದರು.
ತೆಹಲ್ಕಾದ ಹಿಂದಿನ ವಾರದ ಸಂಚಿಕೆಯನ್ನು ತಿರುವಿ ಹಾಕುತ್ತಿದ್ದಾಗ ಅಂದಿನ ದಿನಗಳು ಕಣ್ಣ ಮುಂದೆ ಹಾದು ಹೋದವು. ಆಳವಾದ ತನಿಖೆ, ಅಧ್ಯಯನದಿಂದ ಕೂಡಿದ ಲೇಖನಗಳನ್ನು ತೆಹಲ್ಕಾ ಪ್ರಕಟಿಸಿದೆ. ಅದರಲ್ಲಿ ಒಂದು ಲೇಖನವನ್ನು ಇಲ್ಲಿ ನಿಮಗಾಗಿ. ಇತರೆ ಲೇಖನಗಳಿಗಾಗಿ ಇಲ್ಲಿ ಭೇಟಿ ಕೊಡಿ.
In A Blind Alley
HARINDER BAWEJA Editor, News and Investigations
THE SKYLINE was a dark, uncomfortable grey as I stood at the window of my office in Delhi’s Connaught Place area, watching plumes of thick smoke spiralling skywards. Word had spread that Indira Gandhi had been shot dead by her Sikh bodyguards and a motley crowd of angry protestors had started burning taxis. The phones rang incessantly, each call bringing news of an unfolding carnage.
One such call was from my father, an Indian Air Force officer. He had left his office in Lutyen’s Delhi, the political heart of the Capital, at about 7 pm as he did daily, but that day — 31 October, 1984 — the proud uniformed officer cowered in fear. He had tried making his way home on his Vespa scooter but by then, mobs had already started searching for anyone in a turban.
My father had discarded his turban and worn a helmet to reach home, an act that left a deep wound in his psyche. Another relative hid inside a water tank overnight, after being chased by a mob in South Extension, a posh Delhi locality. The tank water that November night was cold, but he trembled in sheer fright as he described how he ran for dear life.
But the next three days were about death. Every morning, I turned the key of a huge padlock — my family secure within the precincts of the house — and went about my job as a young reporter. I have lost count of the number of times my taxi was stopped by blood-lusting lumpens. They were looking for Sikhs everywhere, anywhere. Under the seat, inside the boot. Several times, they ordered the driver to open the petrol tank and thrusting a rubber pipe in, simply sucked petrol out, preparing for the next kill.
The streets of India’s political capital were littered with burning vehicles, burning houses, burning gurdwaras, burning men. Death was in naked display; turbaned Sikhs easy prey. For three days and nights bonfires raged as the mobs freely slaughtered. Helpless women and children sat around burnt corpses and wailed in Mongolpuri, in Palam, in Bhogal. Faceless colonies now etched in aff idavit after meaningless affidavit.
My father had discarded his turban and worn a helmet to reach home, an act that left a deep wound in his psyche
Police vehicles drove past hapless women in Mongol puri. We waved desperately for them to stop. Help us, help us, the women pleaded, looking in turns at us and the passing vehicle. Why were the cops not stopping? The women pointed us to a nallah, a drain running through Mongolpuri and adjacent Sultanpuri where burnt bodies had been dumped. ‘Stop, stop,’ the women and I screamed in unison when another police car drove by. It slowed for a moment as one of its occupants said, “Hamari duty khatam ho chukki hai.”
They were past their duty hour. So what if mobs were still on the rampage. So what if these widows knew the names of their husbands’ killers? So what if a young innocent, barely in her 20s, was holding her dead four-year-old son to her chest?
Everyone in Mongolpuri revealed the truth as they saw it — Sajjan Kumar, the Congress MP, had freely distributed kerosene bottles and hundred rupee notes, Sajjan Kumar’s men moved around with voters lists in their hands, Sajjan Kumar’s men first beat the men with iron rods, then forced them to cut their hair and then burnt them alive.
Revisiting 1984 is a painful memory; the denial of justice a second stab in the hearts of wretched survivors. 1984 is still about the dead and the living.
WRITER’S EMAILshammy@tehelka.com

Saturday, May 2, 2009

ಚುನಾವಣಾ ಆರ್ಭಟ ಮತ್ತು ಸಮೀಕ್ಷೆ

ರಾಜ್ಯದಲ್ಲಿ ಚುನಾವಣಾ ಬಿಸಿ ತಣ್ಣಗಾಗಿದೆ. ಒಮ್ಮೆ ಹಿಂದಿನ ದಿನಗಳ ಪತ್ರಿಕೆಗಳನ್ನು ತಿರುವಿ ಹಾಕಿದರೆ ಕಣ್ಣಿಗೆ ರಪ್ಪನೆ ರಾಚುವುದು ನಮ್ಮ ರಾಜಕಾರಣಿಗಳ ಆರ್ಭಟ. ಒಬ್ಬರು ಕೈ ಕಡಿಯುವ ಮಾತನಾಡಿದರೆ, ಮತ್ತೊಬ್ಬರು ತೀರಾ ತಲೆಗೆ ಕೈ ಹಾಕಿದರು. ಕೆಲವರು ಇನ್ನೂ ಮುಂದೆ ಹೋಗಿ ತಿಥಿ ಮಾಡುತ್ತೇವೆ ಎಂದರು. ಇವರೆಲ್ಲ ನಮ್ಮನ್ನು ಆಳುವವರು!
ಕಳೆದ ವಿಧಾನಸಭಾ ಚುನಾವಣೆ ಸಂದರ್ಭವನ್ನು ನೆನಪು ಮಾಡಿಕೊಂಡರೆ ಎರಡು ಭಿನ್ನ ಘಟನೆಗಳು ನೆನಪಾಗುತ್ತವೆ. ಒಂದು ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಮಹಿಮಾ ಪಟೇಲ್ ಉಪವಾಸಕ್ಕೆ ಕೂತರು. ತನ್ನ ಉಪವಾಸದ ಮುಊಲಕ ಜನತೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದರು.
ಇನ್ನೊಂದು ಪ್ರಯೋಗ - ರವಿ ಕೃಷ್ಣಾರೆಡ್ಡಿಯದು. ಜನರಿಂದಲೇ ಹಣ ಸಂಗ್ರಹಿಸಿ, ಅದೇ ದುಡ್ಡನ್ನು ಪ್ರಚಾರಕ್ಕೆ ವೆಚ್ಚ ಮಾಡಿದರು. ನಿಜ. ಚುನಾವಣೆಯಲ್ಲಿ ಇಬ್ಬರೂ ಸೋತರು. ಮೇಲ್ನೋಟಕ್ಕೆ ಈ ಪ್ರಯತ್ನಗಳು ತೀರಾ ಅಸಹಜ ಎನ್ನುವಂತೆ ಕಂಡುಬಂದರೂ, ಬದಲಾವಣೆಯೆಡೆಗೆ ನಡೆದ ಪ್ರಯತ್ನಗಳು ಎಂದು ನೋಡಬೇಕಿದೆ. ಈ ಬಾರಿ ಇಂತಹದೇ ಪ್ರಯತ್ನಕ್ಕೆ ಕೈ ಹಾಕಿದವರು ರೈತಸಂಘದ ಪುಟ್ಟಣ್ಣಯ್ಯ. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದ್ದಾರೆ. ಅವರ ಪರ ಪ್ರಚಾರಕ್ಕೆ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಅನೇಕ ರೈತ ಕುಟುಂಬಗಳು ರೊಟ್ಟಿ ಕಟ್ಟಿಕೊಂಡು ಮಂಡ್ಯಕ್ಕೆ ಬಂದಿದ್ದಾರೆ.
ಮಹಿಮಾ ಪಟೇಲ್, ರೆಡ್ಡಿ, ಪುಟ್ಟಣ್ಣಯ್ಯ ಗೆಲ್ಲುವುದಕ್ಕಿಂತಲೂ, ಒಂದು ಚುನಾವಣೆಯನ್ನು ಹೀಗೂ ಸ್ಪರ್ಧಿಸಬಹುದು ಎನ್ನುವುದನ್ನು ಜನತೆಗೆ ತೋರಿಸಿಕೊಟ್ಟರಲ್ಲ. ಆಗಾಗ ಇಂತಹ ಪ್ರಯತ್ನಗಳಾಗದಿದ್ದರೆ, ಬದಲಾವಣೆ ಸಾಧ್ಯ ಎನ್ನುವುದೇ ನಮ್ಮ ಜನರಿಗೆ ಮರೆತು ಹೋಗಿಬಿಡುತ್ತದೆ.
ಈ ಚುನಾವಣೆಯಲ್ಲಿ ಕನ್ನಡ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಒಂದು ಗಂಭೀರ ಅಧ್ಯಯನಕ್ಕೆ ಯೋಗ್ಯ. ಒಂದು ಪತ್ರಿಕೆಯಂತೂ, ರಾಷ್ಟ್ರೀಯ ಪಕ್ಷವೊಂದರ ಮುಖವಾಣಿಯಂತೆ ವರ್ತಿಸಿತು. ಕೆಲ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲೇಬೇಕೆಂದು ಅದರ ಸಂಪಾದಕರು ಪತ್ರಿಕೆ ಮುಖೇನ ಶಿಫಾರಸ್ಸು ಮಾಡಿದರು. ನಂತರ ಅವರನ್ನು ಗೆಲ್ಲುವ ಕುದುರೆ ಎಂದು ಬಿಂಬಿಸುವ ಮುಊಲಕ ಅಭ್ಯರ್ಥಿಯ ಬೆನ್ನಿಗೆ ನಿಂತರು.
ಸಮೀಕ್ಷೆಗಳು:
ಚುನಾವಣೆ ವರದಿಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ನಿಷ್ಪಕ್ಷಪಾತಿಯಾಗಿ ವರ್ತಿಸಿದ್ದು ಪ್ರಜಾವಾಣಿ ಮತ್ತು ಕನ್ನಡಪ್ರಭ. ಈ ಎರಡೂ ಪತ್ರಿಕೆಗಳು ಯಾರ ಪರವೂ ನಿಲ್ಲಲಿಲ್ಲ. ಆದರೆ ವಿಜಯ ಕರ್ನಾಟಕ ಮಾತ್ರ ಹಾಗೆ ಕಾಣಲಿಲ್ಲ. ಈ ಪತ್ರಿಕೆ ನಡೆಸಿದ ಬಹುತೇಕ ಕ್ಷೇತ್ರ ಸಮೀಕ್ಷೆಗಳಲ್ಲಿ ಬಿಜೆಪಿ ಗೆಲ್ಲುವುದೆಂದೇ ಬರೆದರು. ಓದುಗ ಸಮುದಾಯ ಒಂದು ಪತ್ರಿಕೆಯನ್ನು ಒಂದು ಪಕ್ಷಕ್ಕೆ ಸಮೀಕರಿಸಿ ನೋಡುತ್ತಾನೆಂದರೆ, ಅದು ಆ ಮಟ್ಟಿಗೆ ಪತ್ರಿಕೆ ಸಮುದಾಯದ ಪ್ರತಿನಿಧಿಯಾಗುವಲ್ಲಿ ಸೋತಿದೆ ಎಂದೇ ಅರ್ಥ.
ಎಲ್ಲಾ ಪತ್ರಿಕೆಗಳು ಸಮೀಕ್ಷೆಗಳನ್ನು ಪ್ರಕಟಿಸಿದರು. ಹಾಗಾದರೆ ಇವರ ವರದಿಗಾರರು ಸಮೀಕ್ಷೆ ನಡೆಸಿದ ಪರಿ ಯಾವುದು? ಒಂದು ಕ್ಷೇತ್ರದ ಒಂದಿಷ್ಟು ಹಳ್ಳಿ, ನಗರ ಪ್ರದೇಶಗಳಲ್ಲಿ ಕೆಲವರನ್ನು ಮಾತನಾಡಿಸುತ್ತಾರೆ. ಅವರ ಒಲವು ನಿಲುವುಗಳನ್ನು ಕೇಳಿ ಪಡೆಯುತ್ತಾರೆ. ಆ ಮುಊಲಕ ಒಂದು ಅಭಿಪ್ರಾಯಕ್ಕೆ ವರದಿಗಾರ (ಸಮೀಕ್ಷಕ) ಬರುತ್ತಾನೆ. ಅದನ್ನೇ ತನ್ನ ಸಮೀಕ್ಷೆಯಲ್ಲಿ ಬರೆಯುತ್ತಾನೆ. ಆದರೆ ಯಾವ ಪತ್ರಿಕೆಯುಊ ತನ್ನ ಸಮೀಕ್ಷೆಗಾಗಿ ವೈಜ್ಞಾನಿಕ ಮಾದರಿಯನ್ನು ಅನುಸರಿಸಿಲ್ಲ. ಜಾತಿ ಲೆಕ್ಕಾಚಾರ, ಅಭ್ಯರ್ಥಿಯ ವರ್ಚಸ್ಸು, ಬೆಂಬಲಕ್ಕೆ ನಿಂತಿರುವ ಪಕ್ಷ... ಇಂತಹ ವಿವರಗಳ ಜೊತೆ ಆಡ ಆಡುವುದೇ ಸಮೀಕ್ಷೆ.
ಈ ನಿಟ್ಟಿನಲ್ಲಿ ಪತ್ರಿಕಾಲಯಗಳು, ವರದಿಗಾರರು ಯೋಚಿಸುವುದು ಸೂಕ್ತ.