Tuesday, September 1, 2009

ನಿರ್ಗಮಿಸುವ ಮುನ್ನ...

ಸುದ್ದಿಮಾತು ವಿದಾಯ ಹೇಳುವ ಇಂಗಿತ ವ್ಯಕ್ತ ಪಡಿಸಿದ ಮೇಲೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಸಂತೋಷವಾಗಿದೆ. ಸಾಕು ಮುಚ್ಚರಯ್ಯ ಬಾಯಿ ಎಂಬ ಧಾಟಿಯಲ್ಲಿ ಕೆಲವರು ಮಾತನಾಡಿದರೆ, ಮತ್ತೆ ಕೆಲವರು ಬ್ಲಾಗ್ ಬಗ್ಗೆ ಪ್ರೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ಉಮ್ಮೇದಿಯಲ್ಲಿ ಒಬ್ಬರು ಮಾತು ಈ ಬ್ಲಾಗ್ ಬಂದ್ ಎಂದು ಘೋಷಿಸಿ ನಮ್ಮ ಜವಾಬ್ದಾರಿಯನ್ನು ಹಗುರ ಮಾಡ ಹೊರಟಿದ್ದಾರೆ. ಅವರೆಲ್ಲರಿಗೂ ನಾವು ಅಭಾರಿಗಳು. ಇಲ್ಲಿ ಕೆಲವು ಪ್ರತಿಕ್ರಿಯೆಗಳಿವೆ. ಒಮ್ಮೆ ಕಣ್ಣು ಹಾಯಿಸಿ...




ಶ್ಯಾಮಸುಂದರ್ (ದಟ್ಸ್ ಕನ್ನಡದಲ್ಲಿ)
- ಕನ್ನಡದಲ್ಲಿ ಬ್ಲಾಗ್ ಪರಂಪರೆ ಬೆಳೆಯಬೇಕು, ಯಾವ ಬ್ಲಾಗೂ ಕಣ್ಮುಚ್ಚಬಾರದು.
ಅವಧಿಯಲ್ಲಿ ಪ್ರಕಟಗೊಂಡದ್ದು... (ಬೈಲೈನ್ ಇಲ್ಲದ ಕಾರಣ ಇದನ್ನೂ ಅನಾಮಧೇಯ ಕಮೆಂಟ್ ಎಂದು ಗ್ರಹಿಸಲು ಓದುಗ ಸ್ವತಂತ್ರ.)

‘ಸುದ್ದಿಮಾತು’ ಬ್ಲಾಗ್ ತನ್ನ ಚಟುವಟಿಕೆಗಳನ್ನು ಬಂದ್ ಮಾಡಿದೆ. ತಾನು ಬ್ಲಾಗ್ ಆರಂಭಿಸಿದ ಕಾಲದ ಉದ್ದೇಶಕ್ಕೂ ನಂತರ ಬ್ಲಾಗ್ ಲೋಕ ಪಡೆದ ತಿರುವುಗಳಿಗೂ ಕೊಂಡಿ ಹಾಕಿ ‘ಬೇಸತ್ತು’ ಇನ್ನು ಪ್ರಕಟಣೆ ಇಲ್ಲ ಎಂದಿದ್ದಾರೆ. ‘ಸುದ್ದಿಮಾತು’ ಸಹಾ ಅನಾಮಿಕ ಬ್ಲಾಗ್. ವಿಮರ್ಶೆ ಮಾಡುವವರು ಹೆಸರಿಲ್ಲದೆ ವಿಮರ್ಶೆ ಮಾಡಿದರೆ ಅದಕ್ಕೆ ಹೆಚ್ಚೇನೂ ಮೌಲ್ಯ ಇರುವುದಿಲ್ಲ. ಇದನ್ನು ಅರಿತ ‘ಸುದ್ದಿಮಾತು’ ಬಳಗಕ್ಕೆ ಥ್ಯಾಂಕ್ಸ್.
ಅದೇ ಸಮಯದಲ್ಲಿ ‘ಸುದ್ದಿಮಾತು’ ಯಾರದ್ದು ಎನ್ನುವ ಪ್ರಶ್ನಾರ್ಥಕ ಚಿಹ್ನೆ ಹಾಗೇ ಉಳಿದಿದೆ. ಅವರದ್ದು, ಇವರದ್ದು ಇಲ್ಲಾ ನಿಮ್ಮದೇ ಎನ್ನುವ ಊಹಾಪೋಹಗಗಳನ್ನು ಬದಿಗೊತ್ತೋಣ. ಈ ಬ್ಲಾಗ್ ಇಂತಹವರದ್ದೆ ಎಂದು ಹೇಳುವ ಪುರಾವೆ ಇದ್ದರೆ ಅದನ್ನು ಬಹಿರಂಗಪಡಿಸಲು ನಮಗೂ ಇಷ್ಟ. ಕೇವಲ ಈ ಬ್ಲಾಗ್ ಗೆ ಮಾತ್ರ ಅಲ್ಲ ಯಾವುದೇ ಅನಾಮಿಕ ಬ್ಲಾಗ್ ಬಗ್ಗೆ ಪುರಾವೆ ಸಹಿತ ವಿವರ ನೀಡಿದರೆ ಪ್ರಕಟಿಸಲು ಸಿದ್ಧ.
Delete
Blogger
surya said...

ವೈಯಕ್ತಿಕ ನಿಂದೆಯ ಕೆಲ ಆಪಾದನೆಗಳ ನಡುವೆಯೂ ಸಮಕಾಲೀನ ಪತ್ರಿಕೋದ್ಯಮ ರಾಜಕಾರಣ ಕುರಿತು ಅರ್ಥಪೂರ್ಣ ಟೀಕೆ ಟಿಪ್ಪಣಿ ಒಳನೋಟಗಳನ್ನು ನೀಡಿದ ಸುದ್ದಿಮಾತು ಅನಾಮಿಕ ಎಂಬ ಕಾರಣಕ್ಕಾಗಿ ನೇಪಥ್ಯಕ್ಕೆ ಸರಿಯಬೇಕಾಗಿರುವ ಸನ್ನಿವೇಶ ಸೃಷ್ಟಿಯಾಗಿರುವುದು ಆರೋಗ್ಯಕರ ಅಲ್ಲ.
ಡಿ.ಉಮಾಪತಿ
ನವದೆಹಲಿ.


NiTiN Muttige said...

ಎಲ್ಲರ ಮಧ್ಯೆ ನಿಮ್ಮದು ವಿಭಿನ್ನವಾಗಿ ವೈಯಕ್ತಿಕವಾಗಿ ಅಷ್ಟೇಲ್ಲಾ ಕೆರಚು ಎರಚದೆ ಸುದ್ದಿಮನೆಯಲ್ಲಿನ ವಿವರ ಕೊಡುತ್ತಿದ್ರಿ.ಉಳಿದವರು ನೇರವಾಗಿ ವೈಯಕ್ತಿಕವಾಗೇ ದಾಳಿ ಆರಂಭಿಸಿದ್ದು ಬ್ಲಾಗ್ ಗಳ ದುರ್ಧೈವ.ಯಾರೋ ಹೇಳಿದರು ಅಂತ ಈ ತೀರ್ಮಾನ ಯಾಕೆ?.Delete


Blogger Sahana said...

It is not a good decision.
Please continue..
Your blog will help full to media persons & society. In the public interest you should continue to post. I hope you will do.

August 25, 2009 8:49 PM

Delete
Blogger ಎಚ್.ಎನ್. ಈಶಕುಮಾರ್ said...

ಅನಾಮಿಕರ ಸುದ್ದಿಮಾತು ಮುಂದುವರೆಯಲಿ ಎಂಬುದು ನಮ್ಮ ಬಯಕೆ ಆದರು ನಿಮ್ಮ ಸ್ವತಂತ್ರಕ್ಕೆ ಅಡ್ಡಿ ಪಡಿಸೋದು ಬೇಡ ನಿಮ್ಮ ನಿರ್ಧಾರ ಸಮಯೋಚಿತವಾಗಿದೆ.ಯಾರು ಏನನ್ನು ಬದಲಾವಣೆ ಮಾಡಲು ಸಾದ್ಯವಿಲ್ಲ ಅನ್ನೋದು ನಮ್ಮ ದೇಶದ ಅಘೋಷಿತ ಸತ್ಯ ಮನಪೂರ್ವಕ ವಿದಾಯಗಳು ಸುದ್ದಿಮಾತು ಪ್ರವರ್ತಕರೆ.......

Anonymous parasurama kalal said...

ದೂರ ಹೋಗುವ ಬಯಕೆ..ಯಾಕೇ ಯಾಕೇ ಇದು ನನ್ನ ಪ್ರಶ್ನೆ.

Jadi G said...

ಇತ್ತೀಚಿನ ದಿನಗಳಲ್ಲಿ ನೆಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ನೀವು ಬ್ಲಾಗ್ ಬರೆಯುವದನ್ನು ಅಂದ್ರೆ ಈ ಸುದ್ದಿ ಮಾತನ್ನು ನಿಲ್ಲಿಸುವುದ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.

Delete
Anonymous Kruttike said...

ತಪ್ಪು ತೋರಿಸಿಕೊಟ್ಟಾಗ ಹೆಸರುವಾಸಿಯಾದವರಿಗೆ ಮುಖಭಂಗವಾಗುವುದು ಸಹಜವೆ. ಆ ಕಾರಣಕ್ಕಾಗಿ ನೀವೇಕೆ ದೂರಹೋಗಬೇಕು. ಖಂಡಿತ ಮುಂದುವರೆಸಿ. ನಾನಂತೂ ನಿಮ್ಮ ಬ್ಲಾಗ್ ತಪ್ಪದೆ ಓದುವವರಲ್ಲಿ ಒಬ್ಬಳು.

Blogger heggere said...

ಸುದ್ದಿ ಮಾತುಗಾರರೇ
ಸತ್ಯ ಹೇಳುವುದೇ ಈಗಿನ ಕಾಲದ ಅತಿ ದೊಡ್ಡ ತಪ್ಪು ಎನ್ನುವ ಮಂದಿ ಇಲ್ಲಿದ್ದಾರೆ. ನಿಮ್ಮ ಬ್ಲಾಗ್‌ನ ವಿದಾಯದ ಮಾತುಗಳು ನನಗೆ ಇಷ್ಟವಾಗಲಿಲ್ಲ.

Anonymous Anonymous said...

ರೀ, ಬ್ಲಾಗ್ ನಿಲ್ಸಿದ್ರೆ ಹುಷಾರ್! ಅದೇನ್ ಅಷ್ಟು ಸುಲಭ ಅಂದ್ಕೊಂಡ್ರಾ? ಸುಮ್ನೆ ಏನೂ ಕಾರಣ ಹೇಳ್ದೆ continue ಮಾಡಿ.ಅಷ್ಟೆ!

Don't yield to any pressure. That is not good character of a good journalist.August 30, 2009 10:46 AM

Delete
Blogger surya said...

ವೈಯಕ್ತಿಕ ನಿಂದೆಯ ಕೆಲ ಆಪಾದನೆಗಳ ನಡುವೆಯೂ ಸಮಕಾಲೀನ ಪತ್ರಿಕೋದ್ಯಮ ರಾಜಕಾರಣ ಕುರಿತು ಅರ್ಥಪೂರ್ಣ ಟೀಕೆ ಟಿಪ್ಪಣಿ ಒಳನೋಟಗಳನ್ನು ನೀಡಿದ ಸುದ್ದಿಮಾತು ಅನಾಮಿಕ ಎಂಬ ಕಾರಣಕ್ಕಾಗಿ ನೇಪಥ್ಯಕ್ಕೆ ಸರಿಯಬೇಕಾಗಿರುವ ಸನ್ನಿವೇಶ ಸೃಷ್ಟಿಯಾಗಿರುವುದು ಆರೋಗ್ಯಕರ ಅಲ್ಲ.
ಡಿ.ಉಮಾಪತಿ
ನವದೆಹಲಿ.

August 31, 2009 10:09 AM

1 comment:

parssurama kalal said...

ನಿರ್ಗಮಿಸುವ ಮುನ್ನ ಎಂದು ಹೇಳುವ ಮೂಲಕ ನೀವು ವಿದಾಯ ಹೇಳುತ್ತಿರುವುದನ್ನು ಖಚಿತ ಪಡಸುತ್ತಿದ್ದೀರಿ. ಬ್ಲಾಗ್ ಬಂದ್ ಎಂದು ಘೋಷಿಸಿ ಎಂದು ಒಬ್ಬರು ನಮ್ಮ ಜವಾಬ್ದಾರಿಯನ್ನು ಹಗುರ ಮಾಡ ಹೊರಟಿದ್ದಾರೆ. ಅವರೆಲ್ಲರಿಗೂ ನಾವು ಅಭಾರಿಗಳು ಎಂದು ಹೇಳುತ್ತಿದ್ದೀರಿ. ನಿಮಗೆ ಬಂದಿರುವ ೨೫ ಪ್ರತಿಕ್ರಿಯೆಗಳಲ್ಲಿ ಯಾರು ನಿಮ್ಮ ಬ್ಲಾಗ್ ಮುಚ್ಚಿ ಎಂದು ಹೇಳಿಲ್ಲ. ಒಬ್ಬರು ಮಾತ್ರ ಹೇಳಿದ್ದಾರೆ.೨೪ ಜನ ನಿಮ್ಮ ಪರವಾಗಿ ನಿಂತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಮುಖ್ಯ. ಈ ಕಾರಣಕ್ಕಾದರೂ ನೀವು ಬ್ಲಾಗ್ ಮುಚ್ಚದಿರುವ ತೀರ್ಮಾನ ಕೈಗೊಳ್ಳಬೇಕು. ಬ್ಲಾಗ್ ಜೊತೆ ನೀವು ಗುರುತಿಸಿಕೊಳ್ಳಲು ಅಸಾಧ್ಯವಿದ್ದರೆ ನಿಮ್ಮಂತಹ ಮನಸ್ಥಿತಿ ಇರುವ ಹೊರಗಿನವರಿಗೆ ಈ ಜವಾಬ್ದಾರಿ ವಹಿಸಿ, ಒಟ್ಟಿನಲ್ಲಿ ಸುದ್ದಿಮಾತು ನಿರ್ಗಮಿಸುವ ಮಾತು ನಿಲ್ಲಲಿ.
- ಪರಶುರಾಮ ಕಲಾಲ್