
ವಿಜಯ ಕರ್ನಾಟಕ ದಿನಪತ್ರಿಕೆ ಈ ವಿಚಾರ-ವಿವಾದವನ್ನು ಸವಿವರವಾಗಿ

ಅದಿರಲಿ. ಒಂದು ಕ್ಷಣ ಈಜಿಪುರ ಸುದ್ದಿಯನ್ನು ಪಕ್ಕಕ್ಕಿಟ್ಟು, ಗೋಕರ್ಣಕ್ಕೆಬರೋಣ.
ಗೋಕರ್ಣದ ದೇವಾಲಯವೂ ಸರಕಾರದ ಆಸ್ತಿ. ವರ್ಷವೊಂದಕ್ಕೆ ಲಕ್ಷಾಂತರ ಆದಾಯ ತರುತ್ತಿದ್ದ ಪ್ರಮುಖ ದೇವಾಲಯ. ರಾಮಚಂದ್ರಾಪುರ ಮಠದವರು ಬಯಸಿದರು ಎಂದಾಕ್ಷಣ ಸರಕಾರ ಆ ದೇವಾಲಯವನ್ನು ಹಸ್ತಾಂತರಿಸುವ ನಿರ್ಧಾರ ತೆಗೆದುಕೊಂಡಿತು. ಆ ಊರಿನಲ್ಲಿ ಈ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿ ಧರಣಿ, ಪ್ರತಿಭಟನಾ ಮೆರವಣಿಗೆ ಮಾಡಿದರೆ ವಿಜಯ ಕರ್ನಾಟಕದಲ್ಲಿ ಒಂದು ಕಾಲಂ ಸುದ್ದಿಯಿಲ್ಲ. ಪತ್ರಿಕೆ ರಾಮಚಂದ್ರಾಪುರ ಮಠದ ಪರವಾಗಿ ನಿಂತಿತು. ಪರವಾಗಿ ಎಂದರೆ ಕಡಿಮೆಯಾದೀತು; ಮಠದ ಮುಖವಾಣಿಯಾಯಿತು ಎನ್ನಬೇಕು. ಆ ಊರಿನಲ್ಲಿ ಹಸ್ತಾಂತರಕ್ಕೆ ಯಾರ ವಿರೋಧವೂ ಇಲ್ಲ ಎಂದು ಘೋಷಿಸಿತು. ಒಂದು ಪತ್ರಿಕೆ ಹೀಗೆ ಒಂದು ಸಮುದಾಯದ ಅಸ್ತಿತ್ವವನ್ನೇ ಧಿಕ್ಕರಿಸಿತು.
ಗೋಕರ್ಣದ ಅಭಿವೃದ್ಧಿಗಾಗಿ ಹಸ್ತಾಂತರ ಅನಿವಾರ್ಯ ಎನ್ನುವಂತಹ ವರದಿಗಳು ಪ್ರಕಟವಾದವು. ಇದಪ್ಪಾ ತಮಾಷೆ ಅಂದರೆ. ಜನರಿಂದ ಚುನಾಯಿತರಾದ ಸರಕಾರ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಎಂ.ಎಲ್ಎ ಎಲ್ಲರೂ ಇರುವಾಗ ಪಟ್ಟಣದ ಅಭಿವೃದ್ಧಿಗೆ 'ಗೋ ರಕ್ಷಣೆ' ಎಂಬ ಅಸ್ಪಷ್ಟ, ಅಸಂಬದ್ಧ ಕ್ಯಾಂಪೇನ್ ಮಾಡುತ್ತಿರುವ ಸ್ವಾಮೀಜಿಯ ಮೊರೆ ಹೋಗುವುದು ಪ್ರಜಾಪ್ರಭುತ್ವವನ್ನೇ ಲೇವಡಿ ಮಾಡಿದಂತೆ. ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಧಾಟಿಯಲ್ಲಿ ಮಾತನಾಡಿದ್ದು ಅವರ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತದೆ. ಅವರ ಅಭಿಪ್ರಾಯ ನಿಜವೇ ಆಗಿದ್ದಲ್ಲಿ ಒಂದೊಂದು ಪಟ್ಟಣದ ಅಭಿವೃದ್ಧಿಯನ್ನು ಒಂದೊಂದು ಪಟ್ಟಣಕ್ಕೆ ವಹಿಸಿ ಮುಖ್ಯಮಂತ್ರಿ ಮನೆ ಸೇರುವುದು ಒಳಿತು!
ಪ್ರಶ್ನೆ ಇಷ್ಟೆ. ವಿಜಯ ಕರ್ನಾಟಕ ದೇವಾಲಯ ಹಸ್ತಾಂತರ ವಿಚಾರದಲ್ಲಿ ಹಠಕ್ಕೆ ಬಿದ್ದು ಮಠದ ಪರ ನಿಂತದ್ದೇಕೆ? ಈಜಿಪುರದ ಸರಕಾರಿ ಜಮೀನನ್ನು ಕಬಳಿಸಲು ಬಿಡದ ಪತ್ರಿಕೆ ದೇವಾಲಯವನ್ನು ಮಠಕ್ಕೆ ಕೊಡುವಾಗ ಸರಕಾರಕ್ಕೆ ಸಾಥ್ ನೀಡಿದ್ದೇಕೆ?
ಇಲ್ಲಿ ಸ್ಷಷ್ಟವಾಗುವ ವಿಚಾರವೆಂದರೆ, ಮಠಕ್ಕೆ ದೇವಾಲಯ ಹಸ್ತಾಂತರಿಸುವಲ್ಲಿ ಪತ್ರಿಕೆ, ಅದರ ಸಂಪಾದಕರ ಹಿತಾಸಕ್ತಿ ಇತ್ತು. ಅಂತೆಯೇ ಉದಯ ಗರುಡಾಚಾರ್ ಗೆ ಸರಕಾರಿ ಜಮೀನು ತಪ್ಪಿಸಬೇಕೆಂಬ ಯಾವುದೋ ಶಕ್ತಿ ಪತ್ರಿಕೆಯನ್ನು ಹೀಗೆ ಆಡಿಸಿತ್ತು.
ಪತ್ರಿಕೆ ತೀವ್ರ ಕಾಳಜಿಯಿಂದ ಬಡವರ ಜಮೀನಿನ ಪರವಾಗಿ ನಿಂತಿದೆ ಎಂದು ಭಾವಿಸಿದರೆ ಅದು ಓದುಗರ ದಡ್ಡತನವಲ್ಲದೆ ಮತ್ತೇನಲ್ಲ. Of course, ಪತ್ರಿಕೆ ಅಂದುಕೊಂಡಂತೆ ಓದುಗರು ದಡ್ಡರೇನಲ್ಲ!