ಕೆಲದಿನಗಳ ಮಟ್ಟಿಗೆ ನಾವು ಸುಮ್ಮನಿದ್ದೆವು. ಸುಖಾ ಸುಮ್ಮನೆ ಹೀಗೆ... ಏನನ್ನೂ ಬರೆಯದೆ. ಕೆಲವರು ಯಾಕ್ರಿ ಸುಮ್ಮನಾದ್ರಿ ಎಂದರು ವಿಚಾರಿಸಿಕೊಂಡರೆ, ಮತ್ತೆ ಕೆಲವರು 'ನಿಮ್ಮ ವಿರುದ್ಧ ಪೊಲೀಸ್ ಕೇಸು ದಾಖಲಾಗಿರೋ ಕಾರಣ ಸುಮ್ನಾದ್ರ?' ಎಂದು ಕೆಲವರು ತಲೆಗೆ ಹುಳು ಬಿಟ್ಟರು. ಇರಲಿ ಬಿಡಿ.
ಈ ಮಧ್ಯೆ ಒಂದಿಷ್ಟು ಉತ್ತಮ ಬೆಳವಣಿಗೆಗಳು ನಡೆದಿವೆ. ಪತ್ರಕರ್ತರಾದ ಜಿ.ಎನ್ ಮೋಹನ್ ಹಾಗೂ ರವಿ ಹೆಗಡೆ ಪ್ರಯತ್ನಗಳ ಪರಿಣಾಮ ಕನ್ನಡ ಪತ್ರಕರ್ತರ ವೆಬ್ ತಾಣವೊಂದು ಕ್ರಿಯಾಶೀಲವಾಗಿ ರೂಪುಗೊಂಡಿದೆ. ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರಯೋಗಗಳು ಹಾಗೂ ಬದಲಾವಣೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹದೊಂದು ಪ್ರಯತ್ನ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿಯೂ ಉತ್ತಮ ಚರ್ಚೆಗಳಿಗೆ ಈ ತಾಣ ವೇದಿಕೆಯಾಗಲಿ ಎಂದು ಸುದ್ದಿಮಾತು ಹಾರೈಸುತ್ತದೆ.
ಇದು ಚುನಾವಣಾ ಸಮಯ. Of course ಕಳೆದ ಒಂದು ವರ್ಷದಿಂದಲೂ ಚುನಾವಣಾ ಸಮಯ ಜಾರಿಯಲ್ಲಿದೆ. ಮೊದಲು ವಿಧಾನಸಭಾ ಚುನಾವಣೆ. ಅದರ ಬಿಸಿ ತಣ್ಣಾಗಾಗುವುದರಲ್ಲಿಯೇ ಆಪರೇಷನ್ ಕಮಲ. ಉಪಚುನಾವಣೆ. ಅದು ಮುಗೀತಲ್ಲ...ಉಸ್ಸಪ್ಪಾ.. ಎನ್ನುತ್ತಿರುವಾಗಲೇ ಲೋಕಸಭಾ ಚುನಾವಣೆ ಎದುರಿಗಿದೆ. ಉರಿ ಬಿಸಿಲಲ್ಲಿ, ಪದ್ಮನಾಭ ನಗರ, ರೇಸ್ ಕೋರ್ಸ್ ರಸ್ತೆ, ಕ್ವೀನ್ಸ್ ರಸ್ತೆ ಎಂದೆಲ್ಲಾ ಪತ್ರಕರ್ತರು ತಿರುಗಾಡಬೇಕು. ಮುಂದಿನ ಎರಡು ತಿಂಗಳು ಭಾರತ ಮಹತ್ತರ ರಾಜಕೀಯ ಚಟುವಟಿಕೆಗಳಿಗೆ ತನ್ನನ್ನು ತೆರೆದುಕೊಳ್ಳಲಿದೆ. ಅವುಗಳಿಗೆ ಸಾಕ್ಷಿಯಾಗಬೇಕಾದ ಜವಾಬ್ದಾರಿ ಪತ್ರಕರ್ತರದು.
ಎಲ್ಲರಿಗೂ ಒಳಿತಾಗಲಿ.
You reap what you sow on the low moral ground
4 hours ago
0 comments:
Post a Comment