Saturday, February 21, 2009

ಬಜೆಟ್: ರೈತನನ್ನ ಕೇಳೋರಿಲ್ಲ!

ಬಜೆಟ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ಡಾಕುಮೆಂಟ್. ದುಡಿವ ವರ್ಗ, ಗ್ರಾಹಕ, ಉದ್ದಿಮೆದಾರ ತಾನು ಗಳಿಸಿದ್ದರಲ್ಲಿ ಒಂದಿಷ್ಟನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಸಲ್ಲಿಸುತ್ತಾನೆ. ಆ ತೆರಿಗೆ ಜೊತೆ ರಾಜ್ಯ ಸರಕಾರ ನಡೆಸುವವರು ವಿವಿಧ ಮುಊಲಗಳಿಂದ ಹಣವನ್ನು ಸಾಲರೂಪದಲ್ಲಿ ಸಂಗ್ರಹಿಸಿ ರಾಜ್ಯಕ್ಕೆ ಇಂತಿಷ್ಟು ಯೋಜನಾ ವೆಚ್ಚ ನಿಗದಿ ಪಡಿಸುತ್ತಾರೆ.

ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ 29,000 ಕೋಟಿ ರೂ ಗಳಷ್ಟು ಯೋಜನಾ ಗಾತ್ರ ಸಿದ್ಧಪಡಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ಯೋಜನಾ ಗಾತ್ರ ಶೇಕಡ 33 ರಷ್ಟು ಹೆಚ್ಚು. ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಅನೇಕ ಹಳೆ ಯೋಜನೆಗಳು ಮುಂದುವರಿಯಲಿವೆ. ತೆರಿಗೆಗಳಲ್ಲಿ ಹೆಚ್ಚಿನ ಬದಲಾವಣೆಯನ್ನೂ ತಂದಿಲ್ಲ. ಮುದ್ರಾಂಕ ಶುಲ್ಕದಲ್ಲಿ ಒಂದಷ್ಟು ಕಡಿಮೆ ಮಾಡಿ, ಆರ್ಥಿಕ ದುಸ್ಥಿತಿಯಿಂದ ಕುಸಿದಿದ್ದ ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡುವ ಯತ್ನ ಮಾಡಿದ್ದಾರೆ.

ಅದೆಲ್ಲಾ ಒತ್ತಟ್ಟಿಗಿರಲಿ.

ಮುಖ್ಯಮಂತ್ರಿ ಮತ್ತೆ ಮತ್ತೆ ಒತ್ತಿ ಹೇಳುತ್ತಿರುವ ಒಂದು ಕಾರ್ಯಕ್ರಮ ರೈತರಿಗೆ ವ್ಯವಹಾರಿಕ ಬ್ಯಾಂಕ್ ಗಳಲ್ಲೂ ಶೇ 3 ರ ಬಡ್ಡಿದರದಲ್ಲಿ ಬೆಳೆಸಾಲ ದೊರಕಿಸುವುದು. ತಾವು ರೈತಪರ ಎಂದು ಹೇಳಿಕೊಳ್ಳಲು ಬಿಜೆಪಿ ಪಕ್ಷಕ್ಕಿರುವ ಒಂದು ಕಾರ್ಯಕ್ರಮವಿದು. ಕಳೆದ ವರ್ಷ ಈ ಸೌಲಭ್ಯ ಸಹಕಾರಿ ಬ್ಯಾಂಕ್ ಗಳಲ್ಲಿ ಲಭ್ಯವಿತ್ತು. ಮುಖ್ಯಮಂತ್ರಿಯೇ ಹೇಳುವಂತೆ, 2,650 ಕೋಟಿ ರೂಗಳಷ್ಟು ಹಣವನ್ನು ರೈತರು ಬ್ಯಾಂಕ್ ಗಳಿಂದ ಕಳೆದ ವರ್ಷ ಪಡೆದರು. ಈ ಬಾರಿ ಈ ಸೌಲಭ್ಯಕ್ಕಾಗಿ ಸರಕಾರಿ ತನ್ನ ಆಯವ್ಯಯ ಅಂದಾಜಿನಲ್ಲಿ ತೆಗೆದಿರಿಸಿರುವ ಮೊತ್ತ ಕೇವಲ 400 ಕೋಟಿ ರೂ.

ಕಳೆದ ವರ್ಷದ ಆರ್ಥಿಕ ಸಮೀಕ್ಷೆ ಪ್ರಕಾರ ಕರ್ನಾಟಕದ ಒಟ್ಟು ಆಂತರಿಪ ಉತ್ಪನ್ನ ಶೇಕಡ 50 ರಷ್ಟು ಕುಸಿದಿದೆ. ಕೃಷಿ ಕ್ಷೇತ್ರದ ಹೀನಾಯ ಸ್ಥಿತಿಯೇ ಇದಕ್ಕೆ ಪ್ರಮುಖ ಕಾರಣ. ಹಿಂದಿನ ವರ್ಷ ಕೃಷಿ ಕ್ಷೇತ್ರದಲ್ಲಿ ರಾಜ್ಯ ಸಾಧಿಸಿದ್ದು ಋಣಾತ್ಮಕ ಪ್ರಗತಿ (-5)! ಮುಂಗಾರು ಕೈಕೊಟ್ಟಿದ್ದು ಇದಕ್ಕೆ ಕಾರಣ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ವರ್ಷದ ಬಜೆಟ್ ಮಂಡಿಸುವಾಗ ತುಂಬಾ ಎಚ್ಚರ ಆಸ್ಥೆವಹಿಸಬೇಕಾಗಿದ್ದ ಕ್ಷೇತ್ರ ಕೃಷಿ. ಮುಂಗಾರು ವೈಫಲ್ಯ ಜೊತೆಗೆ, ಸಾಮುಊಹಿಕ ವಲಸೆ ಕೂಡ ಕೃಷಿ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದೆ. ಕುಟುಂಬದ ಸದಸ್ಯರೆಲ್ಲರೂ ದುಡಿದರೂ ಹೊತ್ತಿಗೆ ಸರಿಯಾಗಿ ಅನ್ನ ಸಿಕ್ಕದ ಪರಿಸ್ಥಿತಿಯಲ್ಲಿ, ರೈತ ಕುಟುಂಬದ ಯುವಕರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ವಾರಕ್ಕೆ ನಿಯಮಿತವಾಗಿ ಕೂಲಿ ದೊರಕುವ ಕೆಲಸಗಳನ್ನು ಆಯ್ಕೆ ಮಾಡಿಕೊಂಡು ಕೃಷಿ ಮರೆಯುತ್ತಾರೆ. ಅಂತಹವರು ಬ್ಯಾಂಕ್ ನಲ್ಲಿ ಶೇ 3 ರ ಬಡ್ಡಿದರದಲ್ಲಿ ಸಾಲ ದೊರಕುತ್ತೆ ಎಂಬ ಕಾರಣಕ್ಕೆ ಹಳ್ಳಿಗೆ ಹಿಂತಿರುಗಿ ಕೃಷಿ ಮಾಡಲು ಸಾಧ್ಯವೇ?

ಮುಖ್ಯವಾಗಿ ಆಗಬೇಕಾದ್ದು ರೈತನಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ. ತಾನು ಬಿತ್ತುವ ಬೀಜ ಫಲ ಕೊಡುವ ತನಕ ನೀರು ಲಭ್ಯವಾಗುತ್ತೆ ಎಂಬ ವಿಶ್ವಾಸ ಬಂದುಬಿಟ್ಟರೆ ಎಷ್ಟೋ ರೈತರು ಬದುಕಿಕೊಳ್ಳುತ್ತಾರೆ. ಆದರೆ ನಮ್ಮ ಸರಕಾರ ನೀರಾವರಿ ಮಹತ್ವವನ್ನೇ ಅರ್ಥಮಾಡಿಕೊಳ್ಳಲಿಲ್ಲವೇ. ಹಿಂದಿನ ಬಜೆಟ್ ಗಳನ್ನು ನೋಡುತ್ತಾ ಬನ್ನಿ. 2006-07ರಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನೀರಾವರಿಗೆಂದು ಯೋಜವಾ ಗಾತ್ರದ ಶೇ 29.08 ರಷ್ಟು ಹಣ ಮೀಸಲಿಟ್ಟರು. ನಂತರ ಬಂದ ಯಡಿಯುಊರಪ್ಪ ತಮ್ಮ ಮೊದಲ ಬಜೆಟ್ (2006-07)ನಲ್ಲಿ ನೀರಾವರಿಗೆ ನಿಗದಿ ಮಾಡಿದ್ದು ಶೇ 26.48. ನಂತರದ ವರ್ಷ (2007-08) ಈ ಕ್ಷೇತ್ರಕ್ಕೆ ದಕ್ಕಿದ್ದು ಶೇ 17.69. ಕಳೆದ ವರ್ಷ ಯಡಿಯುಊರಪ್ಪ ಮುಖ್ಯಮಂತ್ರಿಯಾಗಿ ಮಂಡಿಸಿದ ಬಜೆಟ್ ನಲ್ಲಿ ನೀರಾವರಿಗೆ ಕೇವಲ ಶೇ 13.37 ರಷ್ಟು ಹಣ ತೆಗೆದಿಟ್ಟರು. ಈ ಬಾರಿ ಶೇ 13.5ಕ್ಕೆ ತಂದು ನಿಲ್ಲಿಸಿದ್ದಾರೆ.

ನೀರಾವರಿ ಕ್ಷೇತ್ರ ಕ್ರಮೇಣ ಆಡಳಿತದಲ್ಲಿರುವವರ ಅವಜ್ಞೆಗೆ ಒಳಗಾಗುತ್ತಿರುವುದು ಸ್ಪಷ್ಟ.

ನಮ್ಮ ರೈತರಿಗೆ ಬಚಾವತ್ ಎ ಮತ್ತು ಬಿ ಸ್ಕೀಮ್ ಗಳ ಅಡಿ ನ್ಯಾಯಯುತವಾಗಿ ದೊರಕಬೇಕಾದ ನೀರು ಇನ್ನೂ ಬಾಕಿ ಇದೆ. ಆದರೆ ಸರಕಾರ ಸೂಕ್ತ ನೀರಾವರಿ ಯೋಜನೆಗಳ ಮುಊಲಕ ನೀರಿನ ಸದುಪಯೋಗ ಪಡೆಯಲು ಸಿದ್ಧರಿಲ್ಲ. ಬರಪೀಡಿತ ರಾಯಚೂರು ಅಥವಾ ಹಿಂದುಳಿದ ಕೊಪ್ಪಳ ಜಿಲ್ಲೆಗಳಿಗೆ ಯಾವ ನದಿ ಮುಊಲದಿಂದಲಾದರೂ ನೀರು ಒದಗಿಸುತ್ತೇವೆ ಎಂಬ ಆಶ್ವಾಸನೆ ಸರಕಾರ ಕೊಟ್ಟರೆ, ಗಂಟು ಮುಊಟೆ ಕಟ್ಟಿ ವಲಸೆಗೆ ಹೊರಟವರು ತಮ್ಮ ನಿರ್ಧಾರವನ್ನು ಕೈಬಿಡುತ್ತಾರೆ. ಸರಕಾರ ಮಾಡಬೇಕಾದ್ದು ಅದನ್ನೆ.

ಇನ್ನು ರೈತರಿಗೆ ಬೇಕಾಗಿದ್ದು ತಾವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಹಾಗೂ ವೈಜ್ಞಾನಿಕ ಬೆಲೆ. ಸರಕಾರ ತನ್ನ 77 ಪುಟಗಳ ಬಜೆಟ್ ನ ಯಾವ ಮುಊಲೆಯಲ್ಲೂ ವೈಜ್ಞಾನಿಕ ಬೆಲೆ ಬಗ್ಗೆ ಮಾತನಾಡುವುದಿಲ್ಲ. ರೈತ ಬೀಜ ಬಿತ್ತುವ ಹೊತ್ತಿಗೆ ತನ್ನ ಫಸಲಿಗೆ ಇಂತಿಷ್ಟು ಬೆಲೆ ಬರುತ್ತೆ ಅಂತ ಖಾತ್ರಿ ಆದರೆ ಅವನಿಗೂ ದುಡಿಯೋ ಹುಮ್ಮಸ್ಸು ಇರುತ್ತೆ. ಇದಾವುದನ್ನೂ ಮಾಡದ ಮೇಲೆ ಅದ್ಯಾವ ಹೆಚ್ಚುಗಾರಿಕೆಗೆ ಸರಕಾರ ಬಜೆಟ್ ಮಂಡಿಸಬೇಕು?

ಕೆಟ್ಟ ಸಂಪ್ರಾದಯ:

ಚುನಾವಣೆಯಲ್ಲಿ ಮತದಾರನಿಗೆ 500 ಅಥವಾ 1,000 ರೂ ದುಡ್ಡು ಕೊಟ್ಟು ಮತ ಕೇಳುವ ಚಾಳಿ ಇತ್ತೀಚೆಗೆ ಬೆಳೆದಿದೆ. ಯಡಿಯುಊರಪ್ಪ ಅದನ್ನು ಸ್ವಲ್ಪ ವಿಸ್ತರಿಸಿ ಆಯಾ ಜಾತಿಗಳ ಮಠಗಳಿಗೆ ಕೋಟಿಗಟ್ಟಲೆ ಹಣ ನೀಡಿ ಇಡೀ ಜನಾಂಗವನ್ನೇ ಓಲೈಸಿಕೊಳ್ಳೋ ಪ್ರಯತ್ನ ಮಾಡಿದ್ದಾರೆ.

ಯಡಿಯುಊರಪ್ಪ ವಿವಿಧ ಮಠಗಳಿಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ಸ್ವಾಮಿಗಳ ಆಶೀರ್ವಾದ ಪಡೆದಿರಬಹುದು. ಆದರೆ ಇಂತಹದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರಿಂದ ಈ ನಾಡಿನ ಜನ ಶಾಪ ಹಾಕುತ್ತಾರೆನ್ನುವುದನ್ನು ಆತ ಮರೆಯದಿರಲಿ. ಎಂದಿಗೂ ತೆರಿಗೆ ಕಟ್ಟದ, ಲೆಕ್ಕ ವ್ಯವಹಾರವನ್ನು ಸರಕಾರಕ್ಕೆ ಒಪ್ಪಿಸದ ಮಠಗಳಿಗೆ ಸರಕಾರದ ಹಣ ತಲುಪುವುದಾದರೆ ಈ ನಾಡಿನ ಜನತೆ ತೆರಿಗೆ ಯಾಕೆ ಕಟ್ಟಬೇಕು?

1 comment:

Anonymous said...

hai,
why you are using singular? are any newspaper or tv media using simgular for anybody who isin pulic life-
varsa.sagar