Sunday, February 15, 2009

ಶಾಂತಕುಮಾರ್ ಮತ್ತೆ ಪ್ರಜಾವಾಣಿ ನೇತಾರ

ಪ್ರಜಾವಾಣಿ ಸಂಪಾದಕರು ಬದಲಾಗಿದ್ದಾರೆ. ಎರಡು ವರ್ಷಗಳ ಹಿಂದೆ ಶಾಂತಕುಮಾರ್ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಸುಧಾ ಹಾಗೂ ಮಯುಊರ ಸಂಪಾದಕತ್ವವನ್ನು ತಮ್ಮ ಹಿರಿಯ ಸಹೋದರ ತಿಲಕ್ ಕುಮಾರ್ ಅವರಿಗೆ ವರ್ಗಾಯಿಸಿದ್ದರು. ಈಗ ಶಾಂತಕುಮಾರ್ 'ಪ್ರಜಾವಾಣಿ' ಮತ್ತು 'ಮಯುಊರ' ಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಡೆಕ್ಕನ್ ಹೆರಾಲ್ಡ್ ಮತ್ತು ಸುಧಾ ಸಂಪಾಕರಾಗಿ ತಿಲಕ್ ಕುಮಾರ್ ಮುಂದುವರಿಯಲಿದ್ದಾರೆ. ಇದೊಂದು ವಿಶಿಷ್ಟ ನಡೆ. ಇದುವರೆಗೆ ಇವರ ಕುಟುಂಬದಲ್ಲಿ ಸಂಪಾದಕತ್ವವನ್ನು ಹೀಗೆ ಹಂಚಿಕೊಂಡಿರಲಿಲ್ಲ.
ಅದಿರಲಿ, ಈ ಬದಲಾವಣೆ ಪತ್ರಿಕೆ ಸ್ವರೂಪ, ಪ್ರಸರಣಗಳ ಮೇಲೆ ಪ್ರಭಾವ ಬೀರುತ್ತದೆಯೇ?
ಕಾದು ನೋಡಬೇಕು. ಈ ಹಿಂದೆ ಶಾಂತಕುಮಾರ್ ಸ್ಥಾನಕ್ಕೆ ತಿಲಕ್ ಕುಮಾರ್ ಬಂದ ನಂತರ ಗಮನಾರ್ಹ ಬದಲಾವಣೆಗಳೇನೂ ಕಾಣಲಿಲ್ಲ. ಈಗ ಹೇಗಾಗುತ್ತೆ ನೋಡಬೇಕು.
ಒಂದಂತೂ ಸತ್ಯ. ಈ ಸಹೋದರರು ತಮ್ಮ ಹಿರಿಯರು ಸ್ಥಾಪಿಸಿದ ಪತ್ರಿಕೆಗಳ ಸಂಪಾದಕತ್ವಕ್ಕೆ ಹಗ್ಗ ಜಗ್ಗಾಟ ನಡೆಸುತ್ತಿದ್ದಾರೆಯೇ ಹೊರತು, ಹೊಸ ಸಾಧ್ಯತೆಗಳತ್ತ ದೃಷ್ಟಿ ಹರಿಸಿದ್ದು ಕಡಿಮೆ. ಆವೃತ್ತಿಗಳ ಸಂಖ್ಯೆ ಹೆಚ್ಚಿಸಿದರೇ ವಿನಃ, ಎದುರಾಗಬಹುದಾದ ಮಾರುಕಟ್ಟೆ ಸಂಬಂಧಿ ತೊಡಕುಗಳಿಗೆ ಸಿದ್ಧತೆ ನಡೆಸಲಿಲ್ಲ. 1948 ರಷ್ಟು ಹಿಂದೆಯೇ ಆರಂಭಗೊಂಡ ಡೆಕ್ಕನ್ ಹೆರಾಲ್ಡ್ ಈ ಹೊತ್ತಿಗೆ ದೇಶಾದ್ಯಂತ ಅಲ್ಲದಿದ್ದರೂ ದಕ್ಷಿಣ ಭಾರತ ರಾಜ್ಯಗಳನ್ನು ಆವರಿಸಿಕೊಳ್ಳಬಹುದಿತ್ತು. ಇಂದಿಗೂ ಹೊರರಾಜ್ಯದಲ್ಲಿ ಇವರ ಆವೃತ್ತಿ ಇಲ್ಲ. ಆ ಕಾರಣ, ಒಂದು ಕಾಲದಲ್ಲಿ ನಂ 1 ಪತ್ರಿಕೆಯಾಗಿದ್ದ ಡೆಕ್ಕನ್ ಹೆರಾಲ್ಡ್ ಈಗ ಕರ್ನಾಟಕದಲ್ಲಿಯೇ ಎರಡನೇ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಇದೆ.
ಜೊತೆಗೆ, ಈ ಹೊತ್ತಿಗೆ ಇವರು ಒಂದು ಸುದ್ದಿ ವಾಹಿನಿಯನ್ನು ಆರಂಭಿಸಿ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ವಿಸ್ತರಿಸಿಕೊಳ್ಳಬಹುದಿತ್ತು. ಅದೂ ಆಗಲಿಲ್ಲ. ಆದರೆ ಒಂದಂತೂ ಸತ್ಯ ಇಂದಿಗೂ ಈ ಪತ್ರಿಕೆಗಳು ಕರ್ನಾಟಕ ಜನತೆ ದೃಷ್ಟಿಯಲ್ಲಿ ವಿಶ್ವಾಸಾರ್ಹ ಪತ್ರಿಕೆಗಳಾಗಿ ಉಳಿದಿವೆ. ಅದೇ ವಿಶ್ವಾಸ ಮತ್ತಷ್ಟು ವಿಸ್ತಾರಗೊಂಡಿದ್ದರೆ ಚೆಂದವಿತ್ತಲ್ಲವೆ?
ಅಂದಹಾಗೆ, ನಮ್ಮ ಮಿತ್ರರೊಬ್ಬರಿಂದ ಸುದ್ದಿಯೊಂದು ಬಂದಿದೆ. ಪ್ರಜಾವಾಣಿ ಸಂಪಾದಕೀಯ ವಿಭಾಗದಲ್ಲಿ ಅನೇಕರು ಒಮ್ಮೆಲೆ ಜ್ವರ, ನೆಗಡಿಯಿಂದ ಬಳಲುತ್ತಿದ್ದಾರಂತೆ. ಅನೇಕರು ಇದೇ ಕಾರಣಕ್ಕೆ ರಜೆ ಹೋಗಿದ್ದಾರಂತೆ. ಸಂಪಾದಕರ ಬದಲಾವಣೆಗೂ, ಈ ಜ್ವರಕ್ಕೂ ಏನಾದರೂ ಸಂಬಂಧ ಇರಬಹುದೆ?

3 comments:

Anonymous said...

avaru jwaradalli hogali, bidali nimagenu, innobbara antarangada vichaara nimageke?

--Ranjit

Anonymous said...

Yes. You are very right. DH and PV should have done something to maintain their no 1 position in Karnataka at least. By easily playing into the hands of other papers which have an agenda, the DH group has let down the people of Karnataka. Especially if PV does not re-asserts its position and emerges the no 1 opinion maker, there is a danger of entire Karnataka turning a Dakshina Kannada where the deadly combination of Udayavani's tacit agenda and Vijaya Karnataka's open agenda have played a havoc with the social harmony...
Hope Shanta Kumar does something to rid the PV of the deadwood and breathe some fresh air

Anonymous said...

could you please concentrate on other papers and tv media. all the time bowing in front of (P.V) cow for dung( gossips).


lakshmipriya