Tuesday, March 31, 2009

ವಿಶ್ವೇಶ್ವರ ಭಟ್ಟರ ದ್ವಂದ್ವ ನೀತಿ!

ಅಮೆರಿಕದಿಂದ ಬಂದ ಜನಾರ್ಧನ ಸ್ವಾಮಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಬಗ್ಗೆ ತಮ್ಮ ಅಂಕಣದಲ್ಲಿ ಹೀಗೆ ಬರೆಯುವ ವಿಶ್ವೇಶ್ವರ ಭಟ್ಟರು ಅದೇ ಅಂಕಣದಲ್ಲಿ, ಅಮೆರಿಕದಿಂದ ಬಂದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರವಿ ಕೃಷ್ಣಾರೆಡ್ಡಿ ಕುರಿತು ಮತ್ತೊಂದು ರೀತಿ ಬರೆಯುತ್ತಾರೆ. ಮಾರ್ಚ್ 29ರ ಭಾನುವಾರದ ಜನಗಳ ಮನ ಅಂಕಣ ನೋಡಿ.


Thursday, March 26, 2009

ಹೊಸ ವರ್ಷ ಇವರಿಗೆ ಸಹಬಾಳ್ವೆ ಕಲಿಸಲಿ...

ಒಂದು ವಾರದ ಅಂತರದಲ್ಲಿ ಇಬ್ಬರು ಬಿಜೆಪಿ ಹುರಿಯಾಗಳು "ನನಗೆ ಒಂದೇ ಒಂದು ಮುಸಲ್ಮಾನನ ಮತ ಬೇಡ" ಎಂದಿದ್ದಾರೆ. ಉತ್ತರ ಪ್ರದೇಶದ ಪಿಲಿಭಿಟ್ ನಿಂದ ಸ್ಪರ್ಧೆ ಮಾಡುತ್ತಿರುವ ವರುಣ್ ಗಾಂಧಿ ಈ ಮಾತುಗಳು ನನ್ನವಲ್ಲ ಎಂದು ಹೇಳಿದ್ದಾನೆ. ಆತ ಆ ಹೇಳಿಕೆ 'ನನ್ನದಲ್ಲ' ಎಂದು ಸಾಬೀತು ಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಇದೇ ಮಾತು ಹೇಳಿದ ಮತ್ತೊಬ್ಬ ಕರ್ನಾಟಕದ ಅನಂತಕುಮಾರ್ ಹೆಗಡೆ. ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಹೆಗಡೆ ಆ ಮಾತುಗಳು ನನ್ನವಲ್ಲ ಎಂದು ವರುಣ್ ತರಹ 'ಸುಳ್ಳು' ಹೇಳಿಲ್ಲ.
ಮುಸಲ್ಮಾನರು ಅತೀ ಕಡಿಮೆ ಸಂಖ್ಯೆಯಲ್ಲಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಇಬ್ಬರು, ಆ ಸಮುದಾಯದ ಮತಗಳಿಲ್ಲದೆಯೂ ತಾವು ಗೆಲ್ಲಬಲ್ಲೆವು ಎಂಬ ದಾಷ್ಟ್ಯದಿಂದ ಈ ಮಾತುಗಲನ್ನಾಡಿದ್ದಾರೆ. ಮತ್ತು ಆ ಮೂಲಕ, ಹಿಂದೂಗಳೆಲ್ಲ ಒಟ್ಟಾಗಿ ತಮಗೇ ಮತಹಾಕಬೇಕು ಎಂಬ ಸಂದೇಶವನ್ನೂ ಸಾರುತ್ತಿರುವುದು ಸ್ಪಷ್ಟ.
ದೇಶ ಅಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೂಲಕ ಪ್ರತಿನಿದಿಗಳನ್ನು ಆಯ್ಕೆಮಾಡುವುದು ಪದ್ಧತಿ. ವರುಣ್ ಮತ್ತು ಹೆಗಡೆಯವರಿಗೆ ಈ ವ್ಯವಸ್ಥೆಯ ಬಗ್ಗೆಯೇ ಅಪನಂಬಿಕೆ ಇದೆ. ಒಂದು ಸಮುದಾಯದವರು ಮತ ಹಾಕದಿದ್ದರೂ ತಾನು ಗೆಲ್ಲುತ್ತೇನೆ ಎನ್ನುವುದಾದರೆ, ಗೆದ್ದ ಮೇಲೆ ಆ ಸಮುದಾಯಕ್ಕೆ ತಾನು ಪ್ರತಿನಿಧಿಯಾಗಿರಲಾರೆ ಎಂದು ಹೇಳಿದಂತೆ.
ಅವರ ಕ್ಷೇತ್ರದ ಮುಸಲ್ಮಾನ ಪ್ರಜೆ ಸಂಕಷ್ಟದಲ್ಲಿದ್ದಾಗ, ಈ ಪ್ರತಿನಿಧಿ ತನಗೂ, ಆತನ ಸಮಸ್ಯೆಗೂ ಸಂಬಂಧವಿಲ್ಲದವನಂತೆ ಇದ್ದು ಬಿಡುತ್ತಾನೆ. ಅಲ್ಪಸಂಖ್ಯಾತ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಅದು ಪ್ರತಿನಿಧಿಯ ಮನಸ್ಸನ್ನು ಘಾಸಿಗೊಳಿಸುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದವರ ಮಕ್ಕಳು ಶಾಲೆಗೆ ಹೋಗದಿದ್ದರೆ, ಇವರ ಪಾಲಿಗೆ ಅದು ಮುಖ್ಯವಲ್ಲ. ಮುಸಲ್ಮಾನರ ಓಣಿಗೆ ಕುಡಿವ ನೀರು ತಲುಪದಿದ್ದರೆ, ಮೋರಿ ಸ್ವಚ್ಛಗೊಳ್ಳದಿದ್ದರೆ, ಸಾಮೂಹಿಕ ಶೌಚಾಲಯ ವ್ಯವಸ್ಥೆ ಇಲ್ಲದಿದ್ದರೆ...ಊಹ್ಞುಂ ಅದಾವುದೂ ಇವರಿಗೆ ಸಮಸ್ಯೆಯೇ ಅಲ್ಲ. Muslims just do not exist for them. ಏಕೆಂದರೆ ಅವರ ಮತ ಇಲ್ಲದಿದ್ದರೂ ಗೆದ್ದುಬಂದರಲ್ಲ!
ಕೆಲ ಇಂಗ್ಲಿಷ್ ಪತ್ರಿಕೆಗಳಲ್ಲಿ ಒಂದು ಧೋರಣೆ ಇದೆ. ಕೂಲಿ ಕಾರ್ಮಿಕನ ಮಗಳು ಅಥವಾ ಬಡ ರೈತನ ಮಗಳು ಅತ್ಯಾಚಾರಕ್ಕೆ ಒಳಗಾದರೆ ಈ ಪತ್ರಿಕೆಗಳಿಗೆ ಅದು ಸುದ್ದಿಯೇ ಅಲ್ಲ. "ಅಯ್ಯೋ, ಆ ಜನ 3ರೂಪಾಯಿ ಕೊಟ್ಟು ನಮ್ ಪೇಪರ್ ಓದ್ತಾರಾ?" ಎಂದು ಆ ಸುದ್ದಿಯನ್ನು ಮೂಲೆಗುಂಪು ಮಾಡುತ್ತಾರೆ. ಆದರೆ ಅದೇ ಐಟಿ ಉದ್ಯೋಗಿ ಅಥವಾ ಶ್ರೀಮಂತ ಕುಟುಂಬದ ಹೆಣ್ಣುಮಗಳಾದರೆ ಅದು ದೊಡ್ಡ ಸುದ್ದಿ. ಕಾರಣ ಅವರು ದುಡ್ಡುಕೊಟ್ಟು ಪೇಪರ್ ಓದ್ತಾರಲ್ಲ?
ಈ ದೇಶದ ಜನಪ್ರತಿನಿಧಿಗಳಾಗಲು ಚುನಾವಣೆಗೆ ನಿಲ್ಲುತ್ತಿರುವ ಆ ಇಬ್ಬರದೂ, ಇಂಗ್ಲಿಷ್ ಪತ್ರಿಕೆ ಮಾಲಿಕರದೂ ಒಂದೇ ಧೋರಣೆ. ದುಡ್ಡು ಕೊಟ್ಟು ಪೇಪರ್ ಓದುವುದಿಲ್ಲ ಎಂಬ ಕಾರಣಕ್ಕೆ ಬಹುದೊಡ್ಡ ಸಮುದಾಯ ಪತ್ರಿಕಾ ಜಗತ್ತಿನಿಂದ ಹೊರಗುಳಿಯುವಂತೆ, ನಿಮ್ಮ ಓಟು ಬೇಡವೆಂದು ಅಲ್ಪಸಂಖ್ಯಾತ ಸಮುದಾಯವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಹೊರಗಿಡುವ ಹುನ್ನಾರ ಈ ಕೋಮುವಾದಿ ರಾಜಕಾರಣಿಗಳದು? ಸಮಾಜದ ಒಂದು ಅಂಗವನ್ನೇ ಹೊರಗಿಡುವ ಮಾತನಾಡುತ್ತಿರುವವರನ್ನು ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತಿರುವ ಪಕ್ಷಕ್ಕೆ ಒಂದಿಷ್ಟು ನಾಚಿಕೆ ಇಲ್ಲವೆ?
ಯುಗಾದಿ ಇವರಿಗೆ ಬುದ್ಧಿ ಕೊಡಲಿ. ಅಂದಹಾಗೆ ನಿಮಗೆಲ್ಲರಿಗೂ ಯುಗಾದಿ ಶುಭಾಶಯಗಳು.

Wednesday, March 25, 2009

ಒಳ್ಳೆಯ ಪ್ರಯತ್ನ, ಒಳ್ಳೆಯದಾಗಲಿ...

ದಿನಕ್ಕೆರಡು ಅಸೈನ್ಮೆಂಟ್, ಎರಡು ಪ್ರೆಸ್ ನೋಟ್ಸ್, ಅದರ ಮೇಲೆ ಪ್ರೆಸ್ ಕ್ಲಬ್ ನ ಬ್ಲಾಕ್ ಟೀ, ರಾತ್ರಿಯಾದರೆ ಮಂದಬೆಳಕಿನಲ್ಲಿ ಮತ್ತೇರಿಸುವ ಪಾನೀಯ... ಅದೆಷ್ಟೋ ಪತ್ರಕರ್ತರಿಗೆ ಇಷ್ಟೇ ಬದುಕು. ಒಂದೇ ಒಂದು ಕೆಲಸ ಹೆಚ್ಚಾದರೂ ಕಿರಿಕಿರಿ. ಇಷ್ಟೆಲ್ಲದರ ಮಧ್ಯೆ ಸಾಮಾಜಿಕ ಸಂಗತಿಗಳ ಬಗ್ಗೆ ಚಿಂತನೆ ಮಾಡಲು, ಚರ್ಚಿಸಲು ಪತ್ರಕರ್ತರಿಗೆ ಸಮಯ, ಸಂಯಮ ಇದೆ ಎನ್ನುವುದೇ ಅಚ್ಚರಿ.

ಮೇಲ್ನೋಟಕ್ಕೆ 'ಸಂವಹನ' ಎಂಬ ಸಂಘಟನೆ ಇದಕ್ಕೆ ಹೊರತಾದ್ದು ಎನಿಸುತ್ತಿದೆ. ಮೀಡಿಯಾದಲ್ಲಿ ತೊಡಗಿಸಿಕೊಂಡಿರುವ ಕೆಲ ಉತ್ಸಾಹಿ ಯುವಕರೇ ಸೇರಿಕೊಂಡು ಈ ಸಂಘಟನೆಗೆ ಚಾಲನೆ ನೀಡಿದ್ದಾರಂತೆ. ದಿನಕ್ಕೆ ಹತ್ತಾರು, ನೂರಾರು ಹೊಸ ಬ್ಲಾಗ್ ಗಳು ಕಣ್ತೆರೆಯುತ್ತವೆ. ಇಂತಹ ಬ್ಲಾಗ್ ಗಳ ಮಧ್ಯೆ ಸಂವಹನದ ಬ್ಲಾಗ್ ವಿಭಿನ್ನವಾಗಿ ಕಂಡುಬಂತು. ಸಮಾನತೆ, ಸಾಮಾಜಿಕ ನ್ಯಾಯ - ಎನ್ನುವ ಪದಗಳು ಆಧುನಿಕ ನಿಘಂಟುವಿನಿಂದ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಇದೇ ಆಶಯಗಳನ್ನು ಹೊತ್ತುಕೊಂಡು ಹೊಸದೊಂದು ಸಂಘಟನೆ ಹುಟ್ಟಿಕೊಂಡಿದೆ ಎಂದು ಬ್ಲಾಗರ್ಸ್ ಹೇಳಿಕೊಳ್ಳುತ್ತಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳು ಬ್ಲಾಗ್ ನಲ್ಲಿವೆ. ಸಂವಹನ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕುರಿತಂತೆ ಏಪ್ರಿಲ್ 5ರಂದು ಒಂದು ವಿಚಾರಗೋಷ್ಠಿ ಹಮ್ಮಿಕೊಂಡಿದೆ. ಹಿರಿಯ ಲೇಖಕ ಯು.ಆರ್ ಅನಂತಮೂರ್ತಿ ಮತ್ತಿತರರು ಭಾಗವಹಿಸುತ್ತಿದ್ದಾರೆ. ಪತ್ರಕರ್ತರು ಇಂತಹ ಪ್ರಯತ್ನಕ್ಕೆ ಕೈ ಹಾಕಿರುವುದು ವಿಶೇಷ. ಆದರೆ, ಎಷ್ಟು ದಿನಗಳವರೆಗೆ ಇವರ ಉತ್ಸಾಹ, ಉಮ್ಮೇದಿ ಹಾಗೇ ಉಳಿದಿರುತ್ತೋ ನೋಡೋಣ.




Tuesday, March 24, 2009

ಬಸವಣ್ಣ ಯಡಿಯೂರಪ್ಪನ ಖಾಸಗಿ ಸ್ವತ್ತು!

ಸುಖಾ ಸುಮ್ಮನೆ ಕೇಳಿದ್ದನ್ನು, ನೋಡಿದ್ದನ್ನು ಎಲ್ಲವನ್ನೂ ಹಾಗೇ ಬರೆದು ಬಿಡಬೇಕು ಎಂಬ ಉಮ್ಮೇದಿ ಅನೇಕ ಪತ್ರಕರ್ತರದು. ಬರೆಯುವ ಮುನ್ನ, ಮೆದುಳಿಗೆ ಒಂದಿಷ್ಟು ಕೆಲಸ ಕೊಟ್ಟರೆ, ಬರೆಯುತ್ತಿರುವುದು ಸೂಕ್ತವೇ, ಅದಕ್ಕೊಂದು ಅರ್ಥವಿದೆಯೇ ಎನ್ನುವ ಪ್ರಶ್ನೆಗಳು ಏಳುತ್ತವೆ.
ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಭಗವಾಧ್ವಜ ಹಾರಿಸಬೇಕೆಂದು ಪಟ್ಟು ಹಿಡಿದರು. ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಯಿತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾತನಾಡುತ್ತ "ಬಿಜೆಪಿಯವರು ಅಡ್ವಾನಿಯನ್ನು ಪ್ರಧಾನಿ ಮಾಡಲು ರಾಜ್ಯದ ಗಡಿಯನ್ನೂ ಮಾರಾಟ ಮಾಡಲು ಸಿದ್ಧರಿದ್ದಾರೆ" ಎಂದು ಟೀಕಿಸಿದರು.
ಈ ಮಾತಿನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಮಾತು ಏನಿತ್ತು, ಆ ದೇವರೇ ಬಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿ, ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು. ಆದರೆ, ಮುಖ್ಯಮಂತ್ರಿ ಮಾತು ವರದಿ ಮಾಡಿದ ಪತ್ರಕರ್ತರು, ಆ ಹೇಳಿಕೆ ಅದ್ಹೇಗೆ ನೀತಿ ಸಂಹಿತೆ ಉಲ್ಲಂಘಿಸುತ್ತದೆ ಎನ್ನುವುದನ್ನು ಕೇಳುವ ಗೋಜಿಗೆ ಹೋಗಲಿಲ್ಲ.
ಇಂತಹದೇ ಇನ್ನೊಂದು ಘಟನೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದಾವಣೆಗೆರೆ ಸಮಾವೇಶದಲ್ಲಿ, ಮಾತನಾಡುತ್ತ ಬಸವಣ್ಣನ ನಾಡಿನಲ್ಲಿ, ಜಾತಿಗಳ ಮಧ್ಯೆ, ಕೋಮುಗಳ ಮಧ್ಯೆ ದ್ವೇಷದ ಬೀಜ ಬಿತ್ತಿ ಸಾಮರಸ್ಯ ಕದಡುವ ಪ್ರಯತ್ನವನ್ನು ರಾಜ್ಯದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ದೂರಿದರು.
ಯಡಿಯೂರಪ್ಪನಿಗೆ ಸಹಿಸಲಾಗಲಿಲ್ಲ. ಬಸವಣ್ಣನ ಹೆಸರು ಬಳಸಿಕೊಂಡು ಸೋನಿಯಾ ಚುನಾವಣಾ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರಿದರು. ಇದಪ್ಪಾ ತಮಾಷೆ ಅಂದರೆ, ಬಸವಣ್ಣ ಯಡಿಯೂರಪ್ಪನ ಖಾಸಗಿ ಸ್ವತ್ತೆ? ಸೋನಿಯಾ ಬಸವಣ್ಣನ ಹೆಸರು ಉಲ್ಲೇಖಿಸಿದ್ದೇ ತಪ್ಪೆ?
ಭುಜಗಳಿಗೆ ರೆಕ್ಕೆ ಕಟ್ಟಿಕೊಂಡವರಂತೆ ರಾಜ್ಯದ ಉದ್ದಗಲಕ್ಕೂ ಅಲೆದಾಡಿ ಮುಖ್ಯಮಂತ್ರಿ ತಮ್ಮ ಬೌದ್ಧಿಕ ದಿವಾಳಿತಕ್ಕೆ ಹತ್ತಿರವಾಗುತ್ತಿದ್ದಾರೆ. ಈ ಮೇಲಿನ ಅರ್ಥವಿಲ್ಲದ ಹೇಳಿಕೆಗಳು, ಅವರ ಮಾನಸಿಕ ಸ್ಥಿತಿಯನ್ನು ಪುಷ್ಟೀಕರಿಸುತ್ತವೆ. ಆದರೆ ಪತ್ರಕರ್ತರಿಗೂ ಅದೇ ಚಾಳಿ ಅಂಟಿಕೊಂಡರೆ!!

Monday, March 23, 2009

Nehru's Turning In His Grave

'ನೆಹರು ಘೋರಿಯಲ್ಲಿ ಮಗ್ಗಲು ಬದಲಿಸಿದ್ದಾರೆ' - ನೆಹರು ಸಂಬಂಧಿ ನಯಾಂತರ ಸಹಗಲ್ ಔಟಲುಕ್ ವಾರಪತ್ರಿಕೆಗಾಗಿ ಬರೆದ ಲೇಖನವನ್ನು ನಮ್ಮ ಓದುಗರಿಗಾಗಿ ನೀಡುತ್ತಿದ್ದೇವೆ. ಸಹಗಲ್ ಗೆ ವರುಣ್ ಮಾತುಗಳಲ್ಲಿ ಅಚ್ಚರಿ ಕಾಣುತ್ತಿಲ್ಲ. ಕಾರಣ ಅವನು ರಾಹುಲ್, ಪ್ರಿಯಾಂಕರಂತೆ ಗಾಂಧಿ ಮನೆತನ ಸಂಪಕರ್ಕಕ್ಕೆ ಬರಲೇ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅಮ್ಮನೊಂದಿಗೆ ಬೇರೆ ಹೋದ. ಗಾಂಧಿ ಮನೆತನದ ಮೌಲ್ಯಗಳು ಗೊತ್ತಾಗಲೇ ಇಲ್ಲ. ಹಾಗಾಗಿ ಅವನೊಬ್ಬ ಕೇವಲ ಬಿಜೆಪಿ ಕಾರ್ಯಕರ್ತ. ಅವರ ಪಕ್ಷಕ್ಕೆ ತಕ್ಕಂತೆ ಅವನು ಮಾತನಾಡಿದ್ದೇನೆ ಎನ್ನುತ್ತಾರೆ ಸಹಗಲ್.

Why harp on Varun's lineage when he has abandoned its ideals?
Nayantara Sahgal
There's only one word for the speech that Varun Gandhi gave in Pilibhit last fortnight—disgraceful. It's horrifying that anybody could speak like that, doubly so when it happens to come from someone who is even remotely connected with the Nehru-Gandhi family. I say "remotely connected" with deliberation, because, while Varun is no doubt a fourth-generation descendant of the family, let us not forget that both he and his mother, Maneka, made an open break with the family.

Varun may have only been a toddler when Maneka severed her ties with the family, but he struck out just as irrevocably when he joined the BJP some five years ago. His break with the family and its ideals was just as decisive as his mother's. He owes his allegiance to the Bharatiya Janata Party (BJP) now, and his connection to the Nehru-Gandhi family is now completely irrelevant.Which is why I am a little surprised at the way the media has been reporting Varun's speech, constantly referring in the same breath to his Nehru connection.

The point is that Varun Gandhi is a member of the BJP. What else do you expect any member of the BJP to say? After all, the BJP is the party that has divided the country on the basis of religion. It's also the party that destroyed the Babri Masjid, the party whose role model is Narendra Modi, on the strength of a massacre in Gujarat. Varun now belongs in the camp that is taking India back to the Middle Ages.India has a long and ancient history that has demonstrated that Hinduism has an awe-inspiring resilience, which has enabled it to survive through the ages.

It does not need all these self-appointed guardians, like the BJP, the Shiv Sena—or any other kind of sena—to safeguard Hinduism. Parties like these are a danger to India. Not just Nehru, even Feroze Gandhi, Varun's grandfather, must be turning in his grave at some of the things he is saying.The difference between Varun and his cousins, Rahul and Priyanka, is that while they were nurtured on the family's secular ideals, he was simply not there. He may have kept up with his cousins and his aunt, Sonia, but having not been brought up within the family, he lost out on his family inheritance, both the ideology and the training.

I had my differences with Indira Gandhi, of course. But we were on the same side on many things, especially secularism. Whatever differences I had with her were because I was speaking and writing in defence of Nehru and what he stood for, and I felt the path she took was going ultimately towards the Emergency—which she herself recognised as a mistake. We were never in divergence on ideology, but on the fact that I felt she was departing from Nehru's own ideals.The Congress, whatever its sins, is dedicated to secularism and the unity of India. These religion-based parties aren't.

Priyanka and Rahul grew up with these ideals. Varun did not. So what if he bears the family name? Many people bear that name: it's neither here nor there. And if the BJP picked him because of his name, that's the BJP's problem, not the family's. I haven't seen Varun since he was a child. But to hear what he is saying now makes me very angry. Even if I were to meet him now, there is nothing I could say to him. He and I don't speak the same language.

There are two languages being spoken in India today: one is Hindutva, and this is finding its own defendants, like Varun and so many others. It's a language that should be severely condemned and punished so that it doesn't damage India any further. From what I have read in the papers, his inflammatory remarks have already led to small riots in Maharashtra. The Ayodhya issue is being raked up and some CDs called 'Ayodhya Chalo' are being circulated. The other language is secularism and peace and equal respect for all religions.That is the language I speak, and that is the language of the Congress. It would be interesting to know why Varun Gandhi has turned his back so squarely against everything his name stands for.
(Nayantara Sahgal is Jawaharlal Nehru's niece.) as told to Sheela Reddy. ಚಿತ್ರ, ಲೇಖನ - ಔಟಲುಕ್.

Thursday, March 19, 2009

ಕ್ಷಮಿಸಬೇಕಂತೆ!!!!

ಪ್ರಜಾವಾಣಿ: ಅಪರಾಧ ವರದಿ ಪುಟ 4; 'ಕ್ಷಮೆ' ಮುಖಪುಟಕ್ಕೆ!!!
ಪಾರ್ಲಿಮೆಂಟ್ ಮೇಲೆ ಭಗವಾಧ್ವಜ ಹಾರಿಸಲು ಹೊರಟವರು ಈಗ ಕ್ಷಮೆಯ ಮಾತನಾಡುತ್ತಿದ್ದಾರೆ. ಭಗವಾಧ್ವಜವನ್ನು ಹಿಂದೂ ರಾಷ್ಟ್ರ ಸಂಕೇತ ಎಂದು ಭಾವಿಸಿ ಹಾಗೆ ಹೇಳಿಕೆ ಕೊಟ್ಟಿದ್ದೆವು. ನಾಡಿನ ಹಿರಿಯರು, ಅದರಲ್ಲೂ ಮುಖ್ಯವಾಗಿ ಚಿದಾನಂದ ಮೂರ್ತಿಯಂತಹವರು ಬೇಸರ ವ್ಯಕ್ತಪಡಿಸಿದ್ದರಿಂದ ಕ್ಷಮೆ ಕೇಳಿದರಂತೆ.

ಈ 'ಕ್ಷಮೆ' ನಾಟಕದಿಂದ ಅವರಿಗೇನೂ ಲಾಭವಿಲ್ಲ. ಪಕ್ಷದ ಇತರರ ಒತ್ತಡಕ್ಕೆ ಮಣಿದು ಕ್ಷಮೆಯ ಮಾತನಾಡಿದ್ದಾರೆ. ಅವರು ಆಳದಲ್ಲಿ ಈ ಹೊತ್ತಿಗೂ ಅವರ ಹೇಳಿಕೆಗೆ ಬದ್ಧರು. ಮೇಲಾಗಿ ಪತ್ರಕರ್ತರ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸದೆ, ಜಾರಿಕೊಂಡ ಕಾರಣ ಇದು ಕೇವಲ 'ನಾಟಕ' ಎಂಬ ಸಂದೇಶವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಆ ಮೂಲಕ ಮರಾಠಿ ಭಾಷಿಕರಿಗೆ ರವಾನಿಸಿದ್ದಾರೆ.

ನಾಡಿನ ಮುಖ್ಯಮಂತ್ರಿ ಮೊದಲು ಬೆಳಗಾವಿ ಘಟನೆ ಬಗ್ಗೆ ತನಗೆ ಮಾಹಿತಿಯೇ ಇಲ್ಲ. ಮಾಹಿತಿ ತರಿಸಿಕೊಂಡು ಪ್ರತಿಕ್ರಿಯಿಸುತ್ತೇನೆ ಎಂದರು. ನಂತರ ಪಕ್ಷದ ಅಧ್ಯಕ್ಷರು ಉತ್ತರಿಸುತ್ತಾರೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದರು. ಕನ್ನಡ ಪರ ಸಂಘಟನೆಗಳು ಸುರೇಶ್ ಅಂಗಡಿಗೆ ಟಿಕೆಟ್ ಕೊಡಬೇಡಿ ಎಂದಾಗ, 'ಅದು ನಮ್ಮ ಪಕ್ಷದ ವಿಚಾರ. ಅದನ್ನು ಕೇಳೋಕೆ ಅವರ್ಯಾರು?' ಎಂದು ಪ್ರಶ್ನೆ ಹಾಕಿದರು.

"ಆಯ್ತು ಸ್ವಾಮಿ. ಆತ ನಿಮ್ಮ ಪಕ್ಷದ ನಾಯಕ. ನೀವು ಟಿಕೆಟ್ ಕೊಟ್ಟಿದೀರಿ. ನೀವೇ ಓಟು ಹಾಕಿ ಗೆಲ್ಲಿಸಿ. ಈ ನಾಡಿನ ಜನತೆಯನ್ನು ಓಟಿಗಾಗಿ ಅಂಗಲಾಚಬೇಡಿ'' ಎನ್ನಬೇಕಾಗುತ್ತದೆ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಇಲ್ಲದ ಮುಖ್ಯಮಂತ್ರಿ ಮಾತ್ರ ಹೀಗೆ ಮಾತನಾಡಬಲ್ಲ. ಕನ್ನಡ ಪರ ಸಂಘಟನೆಗಳು ಸುರೇಶ್ ಅಂಗಡಿಯನ್ನು ಅಭ್ಯರ್ಥಿ ಕಣದಿಂದ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿವೆ. ಇಲ್ಲವಾದಲ್ಲಿ ನಾಡಿನ ಎಲ್ಲೆಡೆ ಬಿಜೆಪಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕೆಗಳು:

ಈ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರವನ್ನು ನೆನಸಿಕೊಳ್ಳಲೇಬೇಕು. ಅಂಗಡಿ ಕ್ಷಮೆ (ನಾಟಕವಾದರೂ) ಕೇಳುವಂತೆ ಮಾಡುವಲ್ಲಿ ಕನ್ನಡ ಪ್ರಭ, ವಿಜಯ ಕರ್ನಾಟಕ, ಉದಯವಾಣಿ ಉತ್ತಮ ಪಾತ್ರ ನಿರ್ವಹಿಸಿದವು. ಸತತ ನಾಲ್ಕುದಿನಗಳ ಕಾಲ ಕನ್ನಡ ಪ್ರಭ, ಸುರೇಶ್ ಅಂಗಡಿ ಹಾಗೂ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿತು.

ಆದರೆ ವಿಚಿತ್ರ ನೋಡಿ, ಭಗವಾಧ್ವಜ ಹಾರಿಸಬೇಕು ಎಂದು ಹೇಳಿಕೆ ನೀಡಿ ಅಪರಾಧ ಎಸಗಿದ್ದನ್ನು ನಾಲ್ಕನೇ ಪುಟದಲ್ಲಿ ಯಾವುದೋ ಸಾಮಾನ್ಯ ಘಟನೆ ಎಂಬಂತೆ ನಿರ್ಲಕ್ಷಿಸಿದ್ದ ಪ್ರಜಾವಾಣಿ, ಆತ ಕ್ಷಮೆ ಕೇಳಿದ್ದನ್ನು ಮಾತ್ರ ಮುಖಪುಟದಲ್ಲಿ ಪ್ರಕಟಿಸಿದೆ! ಇದೂ ಪತ್ರಿಕೋದ್ಯಮ!?

Sunday, March 15, 2009

ಆಯಾಮ ನಾಲ್ಕು, ಪ್ರಶ್ನೆ ಎರಡು

ಪ್ರಜಾವಾಣಿ ಪದ್ಮರಾಜ ದಂಡಾವತಿ ಅಂಕಣ ಆರಂಭಿಸಿದ್ದಾರೆ. ಕಳೆದ ನಾಲ್ಕುವಾರಗಳಿಂದ 'ನಾಲ್ಕನೇ ಆಯಾಮ' ಪ್ರಕಟವಾಗುತ್ತಿದೆ. ಮೊದಲ ಅಂಕಣದಲ್ಲಿ ಯಡಿಯೂರಪ್ಪನ ಆಡಳಿತ ವೈಖರಿಯನ್ನು ಝಾಡಿಸಿದ್ದರು. ಎರಡನೆ ವಾರ 'ಇದು ಚುನಾವಣಾ ಸಮಯ' ಎನ್ನುವ ಧಾಟಿಯಲ್ಲಿ ಒಂದು ಬರಹವಿತ್ತು. ಕಳೆದ ವಾರ ಮಾಧ್ಯಮಗಳನ್ನು ಹಿಗ್ಗಾ ಮುಗ್ಗಾ ಟೀಕಿಸಿದರು. ಮಾಧ್ಯಮಗಳಿಗೆ ಒಂಬುಡ್ಸಮ್ಯಾನ್ ಇದ್ದರೆ ತಪ್ಪೇನು ಎಂದು ವಾದಿಸಿ, ಗೃಹ ಮಂತ್ರಿ ಆಚಾರ್ಯರ ದನಿಗೆ ತಮ್ಮ ದನಿ ಸೇರಿಸಿದ್ದರು.
ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವ ವಿಚಾರ ಕಾಂಗ್ರೆಸ್. ವಯಸ್ಸು, ಒಗ್ಗಟ್ಟು ಹಾಗೂ ಹಣದ ವಿಚಾರಗಳಲ್ಲಿ ಕಾಂಗ್ರೆಸ್ ಇತರ ಪಕ್ಷಗಳಿಗಿಂತ ತೀರಾ ಹಿಂದುಳಿದಿದೆ ಎಂಬುದು ಅವರ ಒಟ್ಟಾರೆ ಅಭಿಪ್ರಾಯ. ಈ ಬರಹ ಓದಿದ ನಂತರ ಎದ್ದು ನಿಂತ ಎರಡು ಪ್ರಶ್ನೆಗಳನ್ನಷ್ಟೆ ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ.

1. ದಂಡಾವತಿಯವರ ಪ್ರಕಾರ 'ಬಿಜೆಪಿಯಲ್ಲಿ ಯಡಿಯೂರಪ್ಪ ಅವರೊಬ್ಬರೇ 60 ದಾಟಿದವರು. ಉಳಿದವರೆಲ್ಲ ಕಾಂಗ್ರೆಸ್ ನ ಘಟಾನುಘಟಿ ನಾಯಕರ ಹಾಗೆ ವಯಸ್ಸಾದವರಲ್ಲ'. ಈ ಮಾತು ಒಪ್ಪತಕ್ಕದ್ದೇ? ಯಡಿಯೂರಪ್ಪನ ಪಕ್ಷದಲ್ಲಿರುವ ರಾಮಚಂದ್ರಗೌಡ (71), ಡಾ.ವಿ.ಎಸ್ ಆಚಾರ್ಯ (69), ಡಿ.ಎಚ್ ಶಂಕರಮೂರ್ತಿ (69), ಸಿ.ಎಂ ಉದಾಸಿ (70+) - ಇವರೆಲ್ಲರೂ ಇನ್ನೂ ಹದಿಹರೆಯದವರೆ? ಚುನಾವಣೆಗೆ ಸ್ಪರ್ಧಿಸುತ್ತಿರುವ ರೇವುನಾಯಕ ಬೆಳಮಗಿ, ಬೀದರ್ ನ ಗುರುಪಾದಪ್ಪ ನಾಗಮಾರಪಲ್ಲಿ ಇನ್ನೂ ಗೋಲಿ ಆಡುವ ಮಕ್ಕಳೆ? ಹೋಗಲಿ, ಬಿಜೆಪಿ ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿರುವ ಎಲ್ ಕೆ ಅಡ್ವಾನಿ (82) ಗೇನು ಕಡಿಮೆ ವಯಸ್ಸೆ?

2. ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ ಎಂಬುದು ಸತ್ಯ. ಖರ್ಗೆ ಕಂಡರೆ ಸಿದ್ದರಾಮಯ್ಯನಿಗೆ ಆಗುವುದಿಲ್ಲ. ಷರೀಫ್ ರನ್ನು ಕಂಡರೆ ಇಬ್ರಾಹಿಂಗೆ ಆಗುವುದಿಲ್ಲ. ಆದರೆ ಕಾಂಗ್ರೆಸ್, ಒಗ್ಗಟ್ಟಿನ ವಿಚಾರದಲ್ಲೂ ಇತರೆ ಪಕ್ಷಗಳಿಗೆ ಸಾಟಿಯಲ್ಲ ಎನ್ನುವಾಗಲಾದರೂ, ಅಂಕಣಕಾರರಿಗೆ ಮೊನ್ನೆ ಮೊನ್ನೆ ನಡೆದ ಬಿಜೆಪಿ ಬೀದಿ ಜಗಳ ನೆನಪಿಗೆ ಬರಲಿಲ್ಲವೆ?
ಪಕ್ಷದ ಅಧ್ಯಕ್ಷರನ್ನು ಹಾಗೂ ಮುಖ್ಯಮಂತ್ರಿಯನ್ನು ಮೂರು ಮಂದಿ ಹಾಲಿ ಸಂಸದರೇ (ಯತ್ನಾಳ್, ಮಲ್ಲಿಕಾರ್ಜುನಯ್ಯ, ಕೆ.ಬಿ ಶಾಣಪ್ಪ) ಸರ್ವಾಧಿಕಾರಿಗಳು ಎಂದು ದೂರಿ, 'ಬಿಜೆಪಿ ಉಳಿಸಿ' ಆಂದೋಲನದ ಮಾತುಗಳನ್ನಾಡಿದ್ದು ತೀರಾ ಕಡೆಗಣಿಸಬೇಕಾದ ಸಂಗತಿಯೆ? ಅನಂತಕುಮಾರ್ ಕೂಡಾ ಬಹಿರಂಗವಾಗಿ ಸದಾನಂದಗೌಡರನ್ನು ಟೀಕಿಸಿದ್ದು ಸುಳ್ಳೆ?
---
ಅಂಕಣ ಬರಹ ಒಂದು ಕಲೆ. ಬರಹವನ್ನು ಓದಿ ಮುಗಿಯುವ ಹೊತ್ತಿಗೆ ಓದುಗನಲ್ಲಿ ಒಂದು ಅಭಿಪ್ರಾಯ ಮೊಳಕೆ ಹೊಡೆಯಬೇಕು. ಅದು ಸಾಧ್ಯವಾಗುವುದು ಬರಹಗಾರ ತನ್ನ ನಿಲುವನ್ನು ಸೂಕ್ತ ಆಧಾರಗಳಿಂದ ಬೆಂಬಲಿಸಿದಾಗ ಮಾತ್ರ. ಅದು ಸಾಧ್ಯವಾಗದಿದ್ದಾಗ ಇಂತಹ ಪ್ರಶ್ನೆಗಳು ಏಳುತ್ತವೆ. ಅಂದಹಾಗೆ ಒಂದು ಅಭಿಪ್ರಾಯವನ್ನು ಮಂಡಿಸುವುದೇ ಅಂಕಣಕಾರನ ಏಕಮೇವ ಉದ್ದೇಶವೂ ಆಗಬೇಕಿಲ್ಲ. ಒಂದು ಘಟನೆ, ಬೆಳವಣಿಗೆಯನ್ನು ನಾನಾ ಕೋನಗಳಿಂದ ನೋಡುವುದು, ಆ ಮೂಲಕ ಹೊಸ ಹೊಳಹುಗಳನ್ನು ಓದುಗನಿಗೆ ತಲುಪಿಸಿದರೆ ಅಂಕಣ ಯಶಸ್ವಿಯಾಗುತ್ತದೆ ಅಲ್ಲವೆ?

Saturday, March 14, 2009

ಉತ್ತರ ಕುಮಾರನ ಪೌರುಷ...

ಬೆಂಗಳೂರಿನ ಪ್ರತಿಷ್ಠಿತ ಡೆಕ್ಕನ್ ಇಂಟರ್ ನ್ಯಾಷನಲ್ ಇತ್ತೀಚೆಗೆ ಶುಲ್ಕ ಹೆಚ್ಚಿಸಿದ್ದನ್ನು ವಿರೋಧಿಸಿ
ಪೋಷಕರು ಕೆಲದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ಪೋಷಕರು ಹೀಗೊಂದು ಘೋಷಣೆ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಅಂದಹಾಗೆ ಆ ಶಾಲೆಯ ಮುಖ್ಯಸ್ಥರು, ಒಂದು ಪತ್ರಿಕೆಯ ಮಾಲೀಕರೂ ಹೌದು.
(ಫೋಟೋ ಕೃಪೆ: ಟೈಮ್ಸ್ ಆಫ್ ಇಂಡಿಯಾ)

Friday, March 13, 2009

ಸುದೀರ್ಘ ಬಿಡುವಿನ ನಂತರ...

ಕೆಲದಿನಗಳ ಮಟ್ಟಿಗೆ ನಾವು ಸುಮ್ಮನಿದ್ದೆವು. ಸುಖಾ ಸುಮ್ಮನೆ ಹೀಗೆ... ಏನನ್ನೂ ಬರೆಯದೆ. ಕೆಲವರು ಯಾಕ್ರಿ ಸುಮ್ಮನಾದ್ರಿ ಎಂದರು ವಿಚಾರಿಸಿಕೊಂಡರೆ, ಮತ್ತೆ ಕೆಲವರು 'ನಿಮ್ಮ ವಿರುದ್ಧ ಪೊಲೀಸ್ ಕೇಸು ದಾಖಲಾಗಿರೋ ಕಾರಣ ಸುಮ್ನಾದ್ರ?' ಎಂದು ಕೆಲವರು ತಲೆಗೆ ಹುಳು ಬಿಟ್ಟರು. ಇರಲಿ ಬಿಡಿ.
ಈ ಮಧ್ಯೆ ಒಂದಿಷ್ಟು ಉತ್ತಮ ಬೆಳವಣಿಗೆಗಳು ನಡೆದಿವೆ. ಪತ್ರಕರ್ತರಾದ ಜಿ.ಎನ್ ಮೋಹನ್ ಹಾಗೂ ರವಿ ಹೆಗಡೆ ಪ್ರಯತ್ನಗಳ ಪರಿಣಾಮ ಕನ್ನಡ ಪತ್ರಕರ್ತರ ವೆಬ್ ತಾಣವೊಂದು ಕ್ರಿಯಾಶೀಲವಾಗಿ ರೂಪುಗೊಂಡಿದೆ. ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರಯೋಗಗಳು ಹಾಗೂ ಬದಲಾವಣೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹದೊಂದು ಪ್ರಯತ್ನ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿಯೂ ಉತ್ತಮ ಚರ್ಚೆಗಳಿಗೆ ಈ ತಾಣ ವೇದಿಕೆಯಾಗಲಿ ಎಂದು ಸುದ್ದಿಮಾತು ಹಾರೈಸುತ್ತದೆ.
ಇದು ಚುನಾವಣಾ ಸಮಯ. Of course ಕಳೆದ ಒಂದು ವರ್ಷದಿಂದಲೂ ಚುನಾವಣಾ ಸಮಯ ಜಾರಿಯಲ್ಲಿದೆ. ಮೊದಲು ವಿಧಾನಸಭಾ ಚುನಾವಣೆ. ಅದರ ಬಿಸಿ ತಣ್ಣಾಗಾಗುವುದರಲ್ಲಿಯೇ ಆಪರೇಷನ್ ಕಮಲ. ಉಪಚುನಾವಣೆ. ಅದು ಮುಗೀತಲ್ಲ...ಉಸ್ಸಪ್ಪಾ.. ಎನ್ನುತ್ತಿರುವಾಗಲೇ ಲೋಕಸಭಾ ಚುನಾವಣೆ ಎದುರಿಗಿದೆ. ಉರಿ ಬಿಸಿಲಲ್ಲಿ, ಪದ್ಮನಾಭ ನಗರ, ರೇಸ್ ಕೋರ್ಸ್ ರಸ್ತೆ, ಕ್ವೀನ್ಸ್ ರಸ್ತೆ ಎಂದೆಲ್ಲಾ ಪತ್ರಕರ್ತರು ತಿರುಗಾಡಬೇಕು. ಮುಂದಿನ ಎರಡು ತಿಂಗಳು ಭಾರತ ಮಹತ್ತರ ರಾಜಕೀಯ ಚಟುವಟಿಕೆಗಳಿಗೆ ತನ್ನನ್ನು ತೆರೆದುಕೊಳ್ಳಲಿದೆ. ಅವುಗಳಿಗೆ ಸಾಕ್ಷಿಯಾಗಬೇಕಾದ ಜವಾಬ್ದಾರಿ ಪತ್ರಕರ್ತರದು.
ಎಲ್ಲರಿಗೂ ಒಳಿತಾಗಲಿ.